ದೇಶದಲ್ಲಿ ಓಮಿಕ್ರಾನ್ ಮೊದಲ ಸಾವು ದಾಖಲು : ರಾಜ್ಯದಲ್ಲಿ ಒಟ್ಟು 23 ಹೊಸ ಒಮಿಕ್ರಾನ್ ಪ್ರಕರಣ | ಜನತಾ ನ್ಯೂಸ್
ಬೆಂಗಳೂರು : ಕರೋನವೈರಸ್ನ ಹೊಸ ರೂಪಾಂತರವಾದ ಓಮಿಕ್ರಾನ್ ಭಾರತದ ಮೇಲೆ ತನ್ನ ಮರಣ ಮೃದಂಗವನ್ನು ಬಾರಿಸಲು ಪ್ರಾರಂಭಿಸಿದ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
ಸದ್ಯಕ್ಕೆ, ದೇಶದಲ್ಲಿ ಇದಕ್ಕೆ ಸಂಬಂಧಿಸಿದ ಮೊದಲ ಸಾವಿನ ಪ್ರಕರಣವು ಮಹಾರಾಷ್ಟ್ರ ರಾಜ್ಯದಲ್ಲಿ ಪತ್ತೆಯಾಗಿದೆ.
52 ವರ್ಷದ ಓಮಿಕ್ರಾನ್ ಸೋಂಕಿತ ವ್ಯಕ್ತಿ ಮಂಗಳವಾರ ಹೃದಯಾಘಾತದಿಂದ ಸಾವನೋಪ್ಪಿದ್ದಾನೆ. ಪುಣೆಯ ಪಿಂಪ್ರಿ ಚಿಂಚ್ವಾಡ್ ಮುನ್ಸಿಪಲ್ ಕಾರ್ಪೊರೇಶನ್ನ ಯಶವಂತರಾವ್ ಚವಾನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ, ಎನ್ನಲಾಗಿದೆ.
ಇಂದು ಕರ್ನಾಟಕದಲ್ಲಿ 23 ಹೊಸ ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ಅದರಲ್ಲಿ 19 ಮಂದಿ ಅಮೇರಿಕಾ, ಯುರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಿಂದ ಬಂದಿರುವ ಅಂತರಾಷ್ಟ್ರೀಯ ಪ್ರಯಾಣಿಕರು, ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಿ ಡಾ.ಸುಧಾಕರ್.ಕೆ ತಿಳಿಸಿದ್ದಾರೆ.
ವರದಿಯ ಪ್ರಕಾರ, 70% ಓಮಿಕ್ರಾನ್ ರೋಗಿಗಳು ಲಕ್ಷಣರಹಿತರಾಗಿದ್ದಾರೆ ಮತ್ತು ರೂಪಾಂತರದ ಹೆಚ್ಚಿನ ಪ್ರಸರಣದೊಂದಿಗೆ, ಅದು ಸಮುದಾಯಕ್ಕೆ ಬಂದ ನಂತರ ಅದು ಬೆಂಕಿಯಂತೆ ಹರಡುತ್ತದೆ. ಏಕೆಂದರೆ ಪಕ್ಕದ ವ್ಯಕ್ತಿ ಸೋಂಕಿಗೆ ಒಳಗಾಗಿದ್ದಾರೆಯೇ ಎಂದು ನಿಮಗೆ ತಿಳಿದಿರುವುದಿಲ್ಲ, ಎಂದು ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ನಿರ್ದೇಶಕ ಹಾಗೂ ಪ್ರೊಫೆಸರ್ ಡಾ.ನರೇಶ್ ಗುಪ್ತಾ ತಿಳಿಸಿದ್ದಾರೆ ಎಂದು ಎಏನ್ಐ ಟ್ವೀಟ್ ಮಾಡಿದೆ.