ಜಮ್ಮು ಮತ್ತು ಕಾಶ್ಮೀರ : ಎನ್ಕೌಂಟರ್ ನಲ್ಲಿ ಭಯೋತ್ಪಾದಕನ ನಿರ್ಮೂಲನ | ಜನತಾ ನ್ಯೂಸ್
ಕುಪ್ವಾರ : ಜಮ್ಮು ಮತ್ತು ಕಾಶ್ಮೀರ ಎನ್ಕೌಂಟರ್ ನಲ್ಲಿ ಭಯೋತ್ಪಾದಕನೋಬ್ಬನನ್ನು ನಿರ್ಮೂಲನ ಮಾಡಲಾಗಿದೆ. ಗಡಿ ಜಿಲ್ಲೆಯ ಕುಪ್ವಾರದ ಗಡಿ ನಿಯಂತ್ರಣ ರೇಖೆಯ ಸಮೀಪವಿರುವ ಜುಮಗುಂಡ್ ಪ್ರದೇಶದ ಕಾಡಿನಲ್ಲಿ, ಭಾರತಿಯ ಸಶಸ್ತ್ರ ಪಡೆ ಹಾಗೂ ಕೇಂದ್ರಾಡಳಿತ ಪ್ರದೇಶದ ಪೊಲೀಸರ ಜಂಟಿ ಪಡೆ ಕೈಗೊಂಡ ಕಾರ್ಯಾಚರಣೆಯಲ್ಲಿ ಅಪರಿಚಿತ ಭಯೋತ್ಪಾದಕನನ್ನು ಕೊಲ್ಲಲಾಯಿತು. ಈ ಪ್ರದೇಶದಲ್ಲಿ ಶೋಧಕಾರ್ಯ ಇನ್ನೂ ನಡೆಯುತ್ತಿದೆ.
ಕಾಶ್ಮೀರ ವಲಯ ಪೊಲೀಸರು ಈ ಕುರಿತು ಪ್ರಕಟಿಸಿದ್ದು, "ಕುಪ್ವಾರದ ಜುಮಗುಂಡ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಒಬ್ಬ ಅಪರಿಚಿತ ಭಯೋತ್ಪಾದಕ ಕೊಲ್ಲಲ್ಪಟ್ಟಿದ್ದಾನೆ. ಸೇನೆ ಮತ್ತು ಪೊಲೀಸರು ಕಾರ್ಯದಲ್ಲಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ" ಎಂದು ಟ್ವೀಟ್ ಮಾಡಿದೆ.
One unidentified #terrorist killed in an #encounter at Jumagund area of #Kupwara. Army & Police are on the job. Further details shall follow.@JmuKmrPolice
— Kashmir Zone Police (@KashmirPolice) January 1, 2022