ದೇವಸ್ಥಾನದಲ್ಲಿ ಬೆತ್ತಲಾದ ವ್ಯಕ್ತಿ, ಬೈಕ್ಗಳಿಗೆ ಬೆಂಕಿಹಚ್ಚಿ ದಾಂಧಲೆ | ಜನತಾ ನ್ಯೂಸ್
ತುಮಕೂರು : ತುಮಕೂರು ಜಿಲ್ಲೆಯ ತಿಪಟೂರಿನ ಸುಪ್ರಸಿದ್ಧ ಹತ್ಯಾಳ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವ್ಯಕ್ತಿಯೊರ್ವ ದೇವರ ಮೇಲಿನ ಹೂವಿನ ಹಾರವನ್ನೇ ಕೊರಳಿಗೆ ಹಾಕಿಕೊಂಡು, ಬೆತ್ತಲಾಗಿ ಸಿಕ್ಕ ಸಿಕ್ಕ ವಸ್ತುಗಳನ್ನು ಬಿಸಾಡಿ, ದಾಂಧಲೆ ಮೆರೆದ್ದಾನೆ.
ರಾತ್ರಿ ಹತ್ಯಾಳ ಸ್ವಾಮಿ ದೇವಸ್ಥಾನದ ಮುಂದೆ ಬೈಕ್ಗಳಿಗೆ ಬೆಂಕಿ ಹಚ್ಚಿ, ಬಾಟೆಲ್ಗಳನ್ನ ಹೊಡೆದು ಹಾರಾಟ-ಚೀರಾಟ ನಡೆಸಿದ್ದಾನೆ. ಹೀಗೆ ಮಾಡಿದಂತ ವ್ಯಕ್ತಿಯನ್ನು ಮಾನಸಿಕ ಅಸ್ವಸ್ಥ ದೇವೇಗೌಡ ಎಂದು ಗುರ್ತಿಸಲಾಗಿದೆ.
ದೇವಸ್ಥಾನದ ಆವರಣದಲ್ಲಿ ಇಟ್ಟಿದ್ದ ಅಂಗಡಿಗಳಲ್ಲಿನ ಪೆಪ್ಸಿ ಬಾಟೆಲ್ ಹೊಡೆದು ಹುಚ್ಚಾಟ ಮೆರೆದಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಕಿಬ್ಬನಹಳ್ಳಿ ಪೊಲೀಸರು, ದಾಂಧಲೆ ನಡೆಸಿದಂತ ಮಾನಸಿಕ ಅಸ್ವಸ್ಥನನ್ನು ಬಂಧಿಸಿದ್ದಾರೆ.
English summary :In tumakur, Naked man in the temple fire to the bikes