ಪ್ರಿಯತಮೆ ಕೈ ಕೊಟ್ಟಳು, ಅಣ್ಣನನ್ನು ಅಪಹರಿಸಿದ ಪ್ರೇಮಿ: ಏಳು ಆರೋಪಿಗಳ ಬಂಧನ | ಜನತಾ ನ್ಯೂಸ್
ಬೆಂಗಳೂರು : ಪ್ರಿಯತಮೆ ಕೈ ಕೊಟ್ಟಳು ಎಂದು ಸಹೋದರನನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿದ ಘಟನೆ ನಗರದ ಬ್ಯಾಡ್ರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರೀನಿವಾಸ್ ಎಂಬಾತ ಎರಡು ಮದುವೆಯಾಗಿತ್ತು. ಎರಡನೇ ಹೆಂಡತಿಯ ಜೊತೆ ನಗರದ ಬ್ಯಾಡರಹಳ್ಳಿಯಲ್ಲಿ ವಾಸವಾಗಿದ್ದ. ಸಾಲದ್ದಕ್ಕೆ ಎದುರು ಮನೆಯಲ್ಲಿದ್ದ ವಿಚ್ಛೇದಿತ ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಶುರು ಮಾಡಿಕೊಂಡಿದ್ದನು.
ಮೂರನೇ ಪ್ರೇಯಸಿಗಾಗಿ ಬೇರೆ ಮನೆ ಮಾಡಿದ್ದನು. ಶ್ರೀನಿವಾಸ್ ಅಲಿಯಾಸ್ ಬೊಟ್ಟು ಸೀನಾನನ್ನು ಬಿಟ್ಟು ಮಹಿಳೆ ತವರು ಸೇರಿದ್ದಳು.
ಆಕೆ ಕೈಕೊಟ್ಟ ಹಿನ್ನೆಲೆ ಗರಂ ಆದ ಆರೋಪಿ ಶ್ರೀನಿವಾಸ್ ಕಾವ್ಯಾಳ ಸಹೋದರ ವೆಂಕಟೇಶ್ ರನ್ನ ಕಿಡ್ನಾಪ್ ಮಾಡಿದ್ದಾನೆ. ಬಳಿಕ ಹೊಸಕೋಟೆ-ಕೋಲಾರಕ್ಕೆ ಕರೆದೊಯ್ದು ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ತಂಗಿಗೆ ವಿಡಿಯೋ ಕಾಲ್ ಮಾಡಿ ನೀನು ಬರದಿದ್ದರೆ ಮುಗಿಸುವುದಾಗಿ ಧಮ್ಕಿ ಹಾಕಿದ್ದನು. ಈ ಕುರಿತು ಬ್ಯಾಡರಹಳ್ಳಿ ಠಾಣೆಗೆ ಮಹಿಳೆ ದೂರು ನೀಡಿದ್ದಳು ಎಂದು ಮಾಹಿತಿ ನೀಡಿದ್ದಾರೆ.