ಮತಾಂತರದ ಕಿರುಕುಳದಿಂದ ವಿದ್ಯಾರ್ಥಿನಿ ಆತ್ಮಹತ್ಯೆ : ಸಿಬಿಐ ತನಿಖೆಗೆ ತ.ನಾ. ಬಿಜೆಪಿ ಆಗ್ರಹ | ಜನತಾ ನ್ಯೂಸ್
ಚೆನ್ನೈ : ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವಂತೆ ಹೆಚ್ಚಿದ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದು, ತಮಿಳುನಾಡು ಡಿಎಂಕೆ ಸರ್ಕಾರ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿ ಸಾಮಾಜಿಕ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ತಮಿಳುನಾಡಿನ ರಾಜ್ಯ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಬಾಲಕಿಯ ಸಾವಿನ ಪ್ರಕರಣದ ಸೂಕ್ತ ತನಿಖೆಗೆ ಹಾಗೂ ರಾಜ್ಯದಲ್ಲಿ ಹೆಚ್ಚುತ್ತಿರುವ ಮತಾಂತರವನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಡೆಸುತ್ತಿರುವ ಧರಣಿ ಇಂದು ಸಹ ಮುಂದುವರೆದಿದೆ.
ಪ್ರತಿಭಟನೆಯ ನೇತ್ರತ್ವ ವಹಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು, ತಮಿಳುನಾಡು ಪೊಲೀಸರು ತನ್ನ ಬೇಜವಾಬ್ದಾರಿ ಹೇಳಿಕೆಗಳಿಂದ ಕಷ್ಟಪಟ್ಟು ಗಳಿಸಿದ ಖ್ಯಾತಿಯನ್ನು ಕಳೆದುಕೊಳ್ಳುವುದನ್ನು ನೋಡಲು ಇದು ತುಂಬಾ ದುಃಖದ ದಿನ. ಬಲವಂತದ ಮತಾಂತರದ ಕುರಿತು ಬಾಲಕಿಯ ಸ್ಪಷ್ಟ ವೀಡಿಯೋ ಸಾಕ್ಷ್ಯ ದೊರೆತಾಗ ಸ್ಥಳೀಯ ಪೊಲೀಸರು ಲಾವಣ್ಯ ಪ್ರಕರಣದ ದಿಕ್ಕನ್ನೇ ಬದಲಿಸಲು ಮುಂದಾಗಿದ್ದಾರೆ", ಪೊಲೀಸರು ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ತಮಿಳುನಾಡು ರಾಜ್ಯದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ಶಾಲೆಯ ಹಾಸ್ಟೆಲ್ನಲ್ಲಿ ಮತಾಂತರಕ್ಕೆ ಒತ್ತಡ ಎದುರಿಸಿದ ನಂತರ ತನ್ನ ಪ್ರಾಣವನ್ನು ತೆಗೆದುಕೊಂಡಿದ್ದಾಳೆ, ಎಂದು ಹೇಳಲಾಗಿದೆ. ಟ್ವಿಟ್ಟರ್ ನಲ್ಲಿ ಲಾವಣ್ಯಗೆ ನ್ಯಾಯ(ಜಸ್ಟಿಸ್ ಫಾರ್ ಲಾವಣ್ಯ) ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗುತ್ತಿದೆ.
12 ನೇ ತರಗತಿಯ ಬಾಲಕಿಗೆ ಧರ್ಮವನ್ನು ಬದಲಾಯಿಸಲು ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಆಕೆಯ ಗೆಳೆಯರು ಮತ್ತು ಹಾಸ್ಟೆಲ್ ವಾರ್ಡನ್ನಿಂದ ಹೆಚ್ಚಿದ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಾಲಕಿಯ ಕುಟುಂಬವು ಆರೋಪಿಸಿದೆ.
ಘಟನೆ ವಿವರ<>
ಲಾವಣ್ಯ ಎಂಬ 17 ವರ್ಷದ ಬಾಲಕಿ 12ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ತಮಿಳುನಾಡಿನ ತಂಜಾವೂರಿನಲ್ಲಿರುವ ಸೇಂಟ್ ಮೈಕೆಲ್ ಗರ್ಲ್ಸ್ ಹೋಂ ನಲ್ಲಿ ವಾಸವಾಗಿದ್ದಳು.
ಮಾಧ್ಯಮ ವರದಿಗಳ ಪ್ರಕಾರ, ಜನವರಿ 9 ರಂದು, ಲಾವಣ್ಯ ಅವರು ವಾಂತಿ ಮಾಡಲು ಪ್ರಾರಂಭಿಸಿದರು ಮತ್ತು ಹೊಟ್ಟೆ ನೋವಿನ ಬಗ್ಗೆ ದೂರು ನೀಡಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಚಿತ್ರೀಕರಿಸಿದ ವೀಡಿಯೊ ದಲ್ಲಿ, ಲಾವಣ್ಯ ತನ್ನ ಬೋರ್ಡಿಂಗ್ ಹೌಸ್ನಲ್ಲಿ ಎದುರಿಸುತ್ತಿರುವ ಅಗ್ನಿಪರೀಕ್ಷೆಗಳನ್ನು ವಿವರಿಸುವುದನ್ನು ಕಾಣಬಹುದು.
ಹಾಸ್ಟೆಲ್ನ ವಾರ್ಡನ್ನಿಂದ ನಿರಂತರವಾಗಿ ನಿಂದಿಸಲಾಗುತ್ತಿದ್ದು, ಹಾಸ್ಟೆಲ್ನ ಎಲ್ಲಾ ಕೊಠಡಿಗಳನ್ನು ಸ್ವಚ್ಛಗೊಳಿಸುವಂತೆ ಮಾಡುತ್ತಿದ್ದಾರೆ, ಎಂದು ಆಕೆ ಹೇಳಿದ್ದಾಳೆ. ತನ್ನ ಧರ್ಮವನ್ನು ಬದಲಾಯಿಸಲು ಮತ್ತು ಕ್ರಿಶ್ಚಿಯನ್ ಧರ್ಮವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ ಎಂದು ಆಕೆ ಆರೋಪಿಸಿದ್ದಾಳೆ.
ತಂಜೂರು ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ವರ್ಗಾಯಿಸಿದ ನಂತರ ಲಾವಣ್ಯಗೆ ಪ್ರಜ್ಞೆ ಬಂದಿದ್ದು, ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ವೈದ್ಯರ ಬಳಿ ತಪ್ಪೊಪ್ಪಿಕೊಂಡಿದ್ದಾಳೆ, ಎನ್ನಲಾಗಿದೆ.
ವಿದ್ಯಾರ್ಥಿಯ ಪೋಷಕರು ಜನವರಿ 15 ರಂದು ದೂರು ದಾಖಲಿಸಿದ್ದು, ಚಿಕಿತ್ಸೆಗೆ ಫಲಕಾರಿಯಾಗದೆ ಅಮಾಯಕ ಯುವತಿ ಜನವರಿ 19 ರಂದು ಆಕೆ ಸಾವನ್ನಪ್ಪಿದ್ದಾಳೆ.
Very sad day to see @tnpoliceoffl losing all its hard earned reputation by its irresponsible statements.
— K.Annamalai (@annamalai_k) January 20, 2022
When there is a clear video testimony by the girl of forced conversion, the local police is hell bent on changing the course of the case of Lavanya.#JusticeforLavanya https://t.co/VdgLdldFzw