ಪಾಕಿಸ್ತಾನ : ಕ್ರಿಶ್ಚಿಯನ್ ಪಾದ್ರಿಯೊಬ್ಬರನ್ನು ಗುಂಡಿಕ್ಕಿ ಕೊಂದ ಅಪರಿಚಿತ, ಇನ್ನೊಬ್ಬ ಪಾದ್ರಿಗೆ ಗಾಯ | ಜನತಾ ನ್ಯೂಸ್
ಪೇಶಾವರ್ : ಪಾಕಿಸ್ತಾನದ ಪೇಶಾವರ್ ದಲ್ಲಿ ಇಂದು ಅಪರಿಚಿತ ಬಂದೂಕುಧಾರಿಗಳು ವಾಹನದಲ್ಲಿ ಸಂಚರಿಸುತ್ತಿದ್ದ ಕ್ರಿಶ್ಚಿಯನ್ ಪಾದ್ರಿಯೊಬ್ಬರನ್ನು ಗುಂಡಿಕ್ಕಿ ಕೊಂದಿದ್ದಾರೆ ಮತ್ತು ಇನ್ನೊಬ್ಬರನ್ನು ಗಾಯಗೊಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಲ್ಲ ಎಂಬುದನ್ನು ಇನ್ನೊಮ್ಮೆ ಸಾಬೀತುಪಡಿಸುವಂತೆ, ಇಸ್ಲಾಮಿಕ್ ಧಾರ್ಮಿಕ ಅಸಹಿಷ್ಣುತೆಯಿಂದ ದೇಶದಲ್ಲಿ ಮತ್ತೊಮ್ಮೆ ಅಲ್ಪಸಂಖ್ಯಾತರು ದಾಳಿಗೆ ಒಳಗಾಗಿದ್ದಾರೆ.
ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದ್ದು, ಪಾಕಿಸ್ತಾನಿಗಳು ಉಗ್ರವಾದವನ್ನು ಹೆಚ್ಚಿಸುತ್ತಿದೆ ಮತ್ತು ಅಲ್ಪಸಂಖ್ಯಾತರನ್ನು ರಕ್ಷಿಸಲು ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕ್ರಿಶ್ಚಿಯನ್ ಪಾದ್ರಿಗಳ ಮೇಲಿನ ಈ ದಾಳಿಯನ್ನು ಪಾಕಿಸ್ತಾನದ ಬಿಷಪ್ ಚರ್ಚ್ನ ಅಧ್ಯಕ್ಷ ಬಿಷಪ್ ಆಜಾದ್ ಮಾರ್ಷಲ್ ಅವರು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಪಾಕ್ ಸರ್ಕಾರದಿಂದ ಕ್ರಿಶ್ಚಿಯನ್ನರ ನ್ಯಾಯ ಮತ್ತು ರಕ್ಷಣೆಗೆ ಒತ್ತಾಯಿಸಿದರು.
"ಇಂದು ಮುಂಜಾನೆ ಪೇಶಾವರ ಧರ್ಮಪ್ರಾಂತ್ಯದ ಧರ್ಮಗುರುಗಳ ಮೇಲೆ ಗುಂಡಿನ ದಾಳಿ ಮತ್ತು ಪಾದ್ರಿ ವಿಲಿಯಂ ಸಿರಾಜ್ ಅವರನ್ನು ಕ್ಷಣದಲ್ಲೇ ಕೊಂದು ರೆವ್ ಪ್ಯಾಟ್ರಿಕ್ ನಯೀಮ್ ಅವರನ್ನು ಗಾಯಗೊಳಿಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಾವು ಪಾಕಿಸ್ತಾನ ಸರ್ಕಾರದಿಂದ ಕ್ರಿಶ್ಚಿಯನ್ನರ ನ್ಯಾಯ ಮತ್ತು ರಕ್ಷಣೆಯನ್ನು ಕೋರುತ್ತೇವೆ", ಎಂದು ಬಿಷಪ್ ಆಜಾದ್ ಮಾರ್ಷಲ್ ಟ್ವೀಟ್ ಮಾಡಿದ್ದಾರೆ.