ಪ್ರತಿಭಟನಾಕಾರರ ಭಯದಿಂದ ಕೆನಡಾ ಪ್ರಧಾನಿ ಅಜ್ಞಾತವಾಸ : ಕರ್ಮದ ಹೊಡೆತ ಎಂದ ಕಂಗನಾ | ಜನತಾ ನ್ಯೂಸ್
ನವದೆಹಲಿ : ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ಟ್ರಕ್ಕರ್ ಪ್ರತಿಭಟನೆಯಿಂದಾಗಿ ರಹಸ್ಯ ಸ್ಥಳಕ್ಕೆ ತೆರಳುವ ನಿರ್ಧಾರಕ್ಕೆ ಬಾಲಿವುಡ್ ಕ್ವೀನ್ ಕಂಗನಾ ರನೌತ್ ಅವರು "ಕರ್ಮ ಮತ್ತೆ ಹೊಡೆಯುತ್ತದೆ" ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
"ಶಾಂತಿಯುತ ಪ್ರತಿಭಟನಾಕಾರರ ಹಕ್ಕುಗಳನ್ನು ರಕ್ಷಿಸಲು ಕೆನಡಾ ಯಾವಾಗಲೂ ಇರುತ್ತದೆ.", ಎಂದು ಹೇಳುವ ಮೂಲಕ ಜಸ್ಟಿನ್ ಟ್ರುಡೊ ಭಾರತದ ರಾಜಧಾನಿ ದೆಹಲಿಯ ಗಡಿಗಳಲ್ಲಿ ಪಂಜಾಬ್ ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಚಿಮಾರಿ ಹಾಕಿಸಿಕೊಂಡಿದ್ದನ್ನು ಮರೆಯುವ ಮುನ್ನವೇ, ತಮ್ಮ ದೇಶ ಕೆನಡಾ ಪ್ರತಿಭಟನಾಕಾರರ ಭಯದಿಂದ ತಲೆಮರೆಸಿಕೊಳ್ಳುವಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಲಸಿಕೆ ಆದೇಶಗಳು, ಮುಖವಾಡಗಳು ಮತ್ತು ಲಾಕ್ಡೌನ್ಗಳ ವಿರುದ್ಧ ಕೆನಡಾದ ಟ್ರಕ್ಕರ್ಗಳು ಪ್ರತಿಭಟನೆ ನಡೆಸುತ್ತಿರುವ ಸುದ್ದಿಗೆ ಕಂಗನಾ ರನೌತ್ ಪ್ರತಿಕ್ರಿಯೆ ಬರೆದಿದ್ದಾರೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಭದ್ರತಾ ಕಾರಣಗಳಿಗಾಗಿ ಇತ್ತೀಚೆಗೆ ರಹಸ್ಯ ಸ್ಥಳಕ್ಕೆ ತೆರಳಿದ ಬೆನ್ನಲ್ಲೇ, ಕಂಗನಾ ಅದನ್ನು "ಕರ್ಮ ಸ್ಟ್ರೈಕ್" ಎಂದು ಟ್ಯಾಗ್ ಮಾಡಿದ್ದಾರೆ.
"ಕೆನಡಾದ ಪ್ರಧಾನಿ ಟ್ರುಡೊ ಭಾರತೀಯ ಪ್ರತಿಭಟನಾಕಾರರನ್ನು ಪ್ರೋತ್ಸಾಹಿಸುತ್ತಿದ್ದರು ಮತ್ತು ಈಗ ಅವರ ದೇಶದಲ್ಲಿ ಪ್ರತಿಭಟನೆಗಳ ನಡುವೆ, ಪ್ರತಿಭಟನಾಕಾರರು ಅವರ ಭದ್ರತೆಗೆ ಬೆದರಿಕೆ ಹಾಕಿದ್ದರಿಂದ ಅವರು ರಹಸ್ಯ ಸ್ಥಳದಲ್ಲಿ ಅಡಗಿಕೊಂಡಿದ್ದಾರೆ. ಹುಂ.. ಕರ್ಮದ ಕಾನೂನು ಮತ್ತೆ ಹೊಡೆದಿದೆ"