ಹಿಜಬ್ ವಿವಾದಗಳ ಹಿಂದೆ ಎಸ್ಡಿಪಿಐ, ಸಿದ್ದರಾಮಯ್ಯ; ರಾಹುಲ್ ಗಾಂಧಿ ದೇಶಕ್ಕೆ ಮಾರಕ - ಬಿಜೆಪಿ | ಜನತಾ ನ್ಯೂಸ್
ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಬ್ ವಿವಾದಗಳ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ರಾಜ್ಯ ಬಿಜೆಪಿ ಇಂದು ಗಂಭಿರವಾಗಿ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ, ಹಿಜಬ್ ವಿವಾದಗಳ ಹಿಂದೆ ಕಾಂಗ್ರೆಸ್ ಮುಖಂಡ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂಬಂತೆ ಪರೋಕ್ಷವಾಗಿ ಆರೋಪಿಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ಶನಿವಾರ ಕರ್ನಾಟಕ ಹಿಜಾಬ್ ವಿವಾದ ಬಗ್ಗೆ ಹೇಳುತ್ತಾ, "ವಿದ್ಯಾರ್ಥಿಗಳ ಹಿಜಾಬ್ ಅವರ ಶಿಕ್ಷಣಕ್ಕೆ ಅಡ್ಡಿಯಾಗಲು ಬಿಡುವ ಮೂಲಕ ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದೇವೆ", ಎಂದು ಹೇಳಿದರು.
ರಾಹುಲ್ ಗಾಂಧಿ ಅವರಿಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಬಿಜೆಪಿ, ಕಾಂಗ್ರೆಸ್ ಸಹ-ಮಾಲೀಕ ರಾಹುಲ್ ಗಾಂಧಿ "ಶಿಕ್ಷಣವನ್ನು ಕೋಮುವಾದ ಮಾಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ ಮತ್ತು "ಅವರು ಭಾರತದ ಭವಿಷ್ಯಕ್ಕೆ ಅಪಾಯಕಾರಿ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ" ಎಂದು ಟ್ವೀಟ್ ಮಾಡಿದೆ. ಇಷ್ಟೇ ಅಲ್ಲದೇ, "ಶಿಕ್ಷಣ ಪಡೆಯಲು ಹಿಜಾಬ್ ತುಂಬಾ ಅವಶ್ಯಕವಾಗಿದ್ದರೆ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ರಾಹುಲ್ ಗಾಂಧಿ ಅದನ್ನು ಏಕೆ ಕಡ್ಡಾಯಗೊಳಿಸುವುದಿಲ್ಲ?" ಎಂದು ಪಕ್ಷವು ಕೇಳಿದೆ.
ಇದಾದ ಬಳಿಕ, ಕರ್ನಾಟಕ ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಬ್ ವಿವಾದಗಳ ಹಿಂದೆ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂಬಂತೆ ಪರೋಕ್ಷವಾಗಿ ಆರೋಪಿಸಿದೆ.
ಈ ಕುರಿತು ಜಾಯಿನ್ ದ ಡಾಟ್ಸ್(ಚುಕ್ಕೆಗಳನ್ನು ಜೋಡಿಸಿ) ಎಂದು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಹಿಂದಿನ ಘಟನೆಗಳನ್ನು ಪಟ್ಟಿ ಮಾಡಿದೆ,
√ ಪಿಎಫ್ಐ ಹಾಗೂ ಎಸ್ಡಿಪಿಐ ಮೇಲಿನ ಪ್ರಕರಣಗಳನ್ನು ಸಿದ್ದರಾಮಯ್ಯ ಸರ್ಕಾರ ಹಿಂದಕ್ಕೆ ತೆಗೆದುಕೊಂಡಿತ್ತು.
√ ಸಿಎಎ ವಿರುದ್ಧ ಕಾಂಗ್ರೆಸ್ ನಡೆಸಿದ ಹೋರಾಟಕ್ಕೆ ಈ ಎರಡು ಸಂಘಟನೆಗಳು ಕೈ ಜೋಡಿಸಿದ್ದವು.
√ ಎಸ್ಡಿಪಿಐ ಪ್ರೇರಿತ ವಿದ್ಯಾರ್ಥಿನಿಯರು ಹಿಜಾಬ್ ವಿವಾದ ಸೃಷ್ಟಿಸಿದರು.
√ ಸಿದ್ದರಾಮಯ್ಯ ಅವರು ಇದಕ್ಕೆ ಬೆಂಬಲ ನೀಡಿದರು. ಹಾಗಾದರೆ ಇವರೆಲ್ಲರೂ ಪರಸ್ಪರ ಸಹಕಾರಿಗಳಲ್ಲವೇ? ಎಂದು ಪ್ರಶ್ನೆ ಮಾಡಿದೆ.
By communalising education, CONgress co-owner @RahulGandhi has once again proved that he is dangerous to the future of India.
— BJP Karnataka (@BJP4Karnataka) February 5, 2022
If Hijab is very much essential to get educated, why doesn't Rahul Gandhi make it mandatory in States ruled by CONgress?#CommunalCONgress https://t.co/MnVoVSJKEm
ಜಾಯಿನ್ ದ ಡಾಟ್ಸ್
— BJP Karnataka (@BJP4Karnataka) February 5, 2022
√ ಪಿಎಫ್ಐ ಹಾಗೂ ಎಸ್ಡಿಪಿಐ ಮೇಲಿನ ಪ್ರಕರಣಗಳನ್ನು ಸಿದ್ದರಾಮಯ್ಯ ಸರ್ಕಾರ ಹಿಂದಕ್ಕೆ ತೆಗೆದುಕೊಂಡಿತ್ತು.
√ ಸಿಎಎ ವಿರುದ್ಧ ಕಾಂಗ್ರೆಸ್ ನಡೆಸಿದ ಹೋರಾಟಕ್ಕೆ ಈ ಎರಡು ಸಂಘಟನೆಗಳು ಕೈ ಜೋಡಿಸಿದ್ದವು.