ನವಜಾತ ಶಿಶುವನ್ನು ಕಿತ್ತು ತಿಂದ ಶ್ವಾನಗಳು ಹೃದಯ ವಿದ್ರಾವಕ ಘಟನೆ | ಜನತಾ ನ್ಯೂಸ್
ಹಾಸನ : ನವಜಾತ ಮಗುವನ್ನು ಬೀದಿ ನಾಯಿಗಳು ಎಳೆದಾಡಿಕೊಂಡು ತಿಂದಿರುವ ಹೃದಯ ವಿದ್ರಾವಕ ಘಟನೆಗೆ ಹಾಸನದಳ್ಳಿ ನಡೆದಿದೆ.
ಹಾಸನದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ನಾಯಿಗಳು ತಿಂದಿರುವ ರುಂಡವಿಲ್ಲದ ಮಗು ಪತ್ತೆಯಾಗಿದೆ. ಬಸ್ ನಿಲ್ದಾಣದ ಸಮೀಪ ಇರುವ ರೈಲ್ವೆ ಟ್ರ್ಯಾಕ್ ಕಡೆಯಿಂದ ನಾಯಿ ಹಸುಗೂಸಿನ ಮೃತದೇಹವನ್ನ ಹೊತ್ತು ತಂದಿದೆ. ಜನರು ನಾಯಿಯಿಂದ ಮೃತದೇಹವನ್ನು ಬಿಡಿಸಿದ್ದಾರೆ. ಅಷ್ಟರಲ್ಲೇ ಮಗುವಿನ ತಲೆಯ ಭಾಗ, ಎರಡು ಕೈ ಕಾಲಿನ ಭಾಗವನ್ನ ತಿಂದು ಮುಗಿಸಿದ್ದವು.
ಮಗುವಿನ ಮೃತದೇಹವನ್ನ ನಾಯಿಯಿಂದ ರಕ್ಷಣೆ ಮಾಡಿ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಹಾಸನದ ಬಡಾವಣೆ ಠಾಣೆ ಪೊಲೀಸರು ಮಗುವಿನ ಮೃತದೇಹವನ್ನು ವಶಕ್ಕೆ ಪಡೆದು, ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮಕ್ಕಳಿಲ್ಲದೆ ಅದೆಷ್ಟೊ ಜನರು ಕೊರಗುತ್ತಿದ್ದಾರೆ. ಮಗು ಬೇಡವಾಗಿದ್ದರೆ ಅನಾಥಾಶ್ರಮಕ್ಕೆ ಕೊಡಬಹುದು. ಅತಃಅದ್ರಲ್ಲಿ ಇತರಹದ ಘಟನೆ ಹೃದಯ ವಿದ್ರಾವಕ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ. ಹಾಸನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.