ಕೇಂದ್ರದ ಬಲ ಕುಗ್ಗಿಸಲು ಹೊಸ ಸಂವಿದಾನ ರಚನೆಗೆ ತೆಲಂಗಾಣ ಸಿಎಂ ಕರೆ : ಕಾಂಗ್ರೆಸ್ ಮುಖಂಡ ಆನಂದ ಶರ್ಮ ಖಂಡನೆ | ಜನತಾ ನ್ಯೂಸ್
ನವದೆಹಲಿ : ಹೊಸ ಸಂವಿಧಾನವನ್ನು ರಚಿಸುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಇತ್ತೀಚೆಗೆ ನೀಡಿದ ಕರೆಯನ್ನು ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ಅವರು ತೀವ್ರವಾಗಿ ವಿರೋಧಿಸಿದ್ದು, ಇದು ದೇಶದಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ "ಬಲೆ" ಎಂದು ಬಣ್ಣಿಸಿದ್ದಾರೆ.
"ಸಂವಿಧಾನವನ್ನು ಪುನಃ ಬರೆಯಬೇಕೆಂಬ ಅವರ ಕರೆಗೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರೊಂದಿಗೆ ಬಲವಾಗಿ ಭಿನ್ನಾಭಿಪ್ರಾಯವಿದೆ, ಇದು ಸ್ವೀಕಾರಾರ್ಹವಲ್ಲ. ಇದು ಎಲ್ಲರಿಗೂ ನ್ಯಾಯಸಮ್ಮತವಾದ ಹಕ್ಕುಗಳನ್ನು ಖಾತರಿಪಡಿಸುವ ಭಾರತದ ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಕೆಡವಲು ಸಂಚು ಹೂಡುತ್ತಿರುವವರ ಬಲೆಯಾಗಿದೆ" ಎಂದು ಹೇಳಿ ಆನಂದ್ ಶರ್ಮಾ ಶನಿವಾರ ಟ್ವೀಟ್ ಮಾಡಿದ್ದಾರೆ.
ಕೆಸಿಆರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶರ್ಮಾ, ತೆಲಂಗಾಣ ಸಿಎಂ ಇಂತಹ ಕಲ್ಪನೆಯನ್ನು ತೇಲಿಸುವ ಮೂಲಕ ತಮ್ಮ ಪ್ರಮಾಣವಚನವನ್ನು ಉಲ್ಲಂಘಿಸಿದ್ದಾರೆ, ಎಂದು ಹೇಳಿದರು.
ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಮತ್ತು ಸಂಸದರು ಸಂವಿಧಾನವನ್ನು ಎತ್ತಿ ಹಿಡಿಯುವ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಅವರು ತಮ್ಮ ಪ್ರಮಾಣ ವಚನವನ್ನು ಉಲ್ಲಂಘಿಸಿದ್ದಾರೆ, ಇದು ಕಳವಳಕಾರಿ ಸಂಗತಿಯಾಗಿದೆ, ಎಂದು ಶರ್ಮಾ ಹೇಳಿದ್ದಾರೆ.
ಸತತ ಕೇಂದ್ರದಲ್ಲಿ ಮೋದಿ ಸರ್ಕಾರಗಳು ಬರುವ ಸೂಚನೆ ಇದ್ದು ಅದು ಇತರೆ ರಾಜಕೀಯ ಪಕ್ಷಗಳ ಸರ್ಕಾರವಿರುವ ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುವ ಸಾದ್ಯತೆಗಳಿವೆ ಎಂದು ಹೊಸ ಸಂವಿಧಾನವನ್ನು ರಚಿಸಲು ಕೆಸಿಆರ್ ಒಲವು ತೋರಿದ್ದರು.