ಶಿವಮೊಗ್ಗದಲ್ಲಿ ಮಂತ್ರಿ ಮಗನೊಬ್ಬ ಕೋಟಿ ಕೋಟಿ ಶಾಲುಗಳನ್ನು ತರಿಸಿ ಹಂಚಿದ್ದಾನೆ | ಜನತಾ ನ್ಯೂಸ್
ಬೆಂಗಳೂರು : ಶಿವಮೊಗ್ಗ ಜಿಲ್ಲೆಯಲ್ಲಿ ಮಂತ್ರಿ ಮಗನೊಬ್ಬ ಕೋಟಿ ಕೋಟಿ ಶಾಲುಗಳನ್ನು ತರಿಸಿ ಹಂಚುವಂತಹ ಕೆಲಸ ಮಾಡಿದ್ದಾರೆ ಎಂದು ಡಿ ಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಕೇಸರಿ ಪೇಟಾ, ಶಾಲುಗಳನ್ನು ತಂದವರು ಯಾರು ಎಂಬುದನ್ನು ಬಿಜೆಪಿ ನಾಯಕರು ಹೇಳಬೇಕು ಎಂದು ಡಿಕೆಶಿ ಆಗ್ರಹಿಸಿದ್ದಾರೆ.
ಧ್ವಜ ಸ್ತಂಭದಲ್ಲಿ ಕೇಸರಿ ಬಾವುಟ ಹಾರಿಸಿದ್ದು ಅಕ್ಷಮ್ಯ. ಕಂಬ ಬೇರೆ - ಧ್ವಜ ಬೇರೆನಾ? ಅದಕ್ಕೊಂದು ಸಂಹಿತೆ ಇದೆ. ಎಲ್ಲಾ ಧ್ವಜ ಅಲ್ಲಿ ಹಾರಿಸಲು ಬರುವುದಿಲ್ಲ. ರಾಷ್ಟ್ರದ ಧ್ವಜ ಹಾರಿಸುವ ಕಂಬದ ಮೇಲೆ ಕೇಸರಿ ಧ್ವಜ ಹಾರಿಸುವುದು ಎಷ್ಟು ಸರಿ ಎಂದು ಡಿಕೆಶಿ ಪ್ರಶ್ನಿಸಿದರು.
50 ಲಕ್ಷ ಕೇಸರಿ ಶಾಲುಗಳನ್ನು ಗುಜರಾತ್ನ ಸೂರತ್ನಿಂದ ತರಿಸಿಕೊಂಡಿದ್ದಾರೆ ಎಂದು ಇದೇ ವೇಳೆ ಡಿಕೆಶಿ ಗಂಭೀರ ಆರೋಪ ಮಾಡಿದರು. ಜಿಲ್ಲೆಯಲ್ಲಿ ಬಿಜೆಪಿ ಮಂತ್ರಿ ಮಗನೇ ಕೇಸರಿ ಶಾಲುಗಳನ್ನು ತರಿಸಿ ಹಂಚಿದ್ದಾರೆ. ಎಲ್ಲಾ ಬಿಜೆಪಿ ಕಾರ್ಯಕರ್ತರು ಈ ಶಾಲುಗಳನ್ನು ಹಂಚುವುದಕ್ಕೆ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಚುನಾವಣೆ ಬಂದ ಸಂದರ್ಭದಲ್ಲಿ ರಾಜಕಾರಣ ಮಾಡೋಣ. ಆದರೆ ಮಕ್ಕಳ ಮನಸ್ಸಿನಲ್ಲಿ ಏಕೆ ಇಂಥ ವಿಷಯಗಳನ್ನು ತುಂಬುತ್ತಿದ್ದೀರಿ. ಮಕ್ಕಳ ಮನಸ್ಥಿತಿಯನ್ನು ಏಕೆ ಹಾಳು ಮಾಡುತ್ತಿದ್ದೀರಾ. ಅನಗತ್ಯವಾಗಿ ಏಕೆ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದ್ದೀರಿ. ಮಕ್ಕಳಲ್ಲಿ ಜಾತಿ-ಧರ್ಮ ಎಂಬ ವಿಷಬೀಜ ಬಿತ್ತುವುದು ಏಕೆ ಬೇಕು ಎಂದು ಡಿ ಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
ಕೊತ್ವಾಲ್ ಶಿಷ್ಯ ಈಗ ಹಿಟ್ & ರನ್ ರಾಜಕೀಯ ಪ್ರಾರಂಭಿಸಿದ್ದಾರೆ. ಬಿಜೆಪಿಯವರು ಸೂರತ್ನಿಂದ ಪೇಟಗಳನ್ನು ತರಿಸಿದ್ದಾರೆ ಎಂದು ಇನ್ನೊಂದು ಸುಳ್ಳು ಆರೋಪ ಮಾಡಿದ್ದಾರೆ. ಡಿಕೆಶಿಯವರೇ, ಹಿಜಾಬ್ ವಿವಾದ ಮುಗಿಯುವವರೆಗೆ ಇನ್ನೆಷ್ಟು ಸುಳ್ಳು ಹೇಳುತ್ತೀರಿ?.. ಎಂದು ಬಿಜೆಪಿ ಪ್ರಶ್ನಿಸಿದೆ.
ಕೊತ್ವಾಲ್ ಶಿಷ್ಯ ಈಗ ಹಿಟ್ & ರನ್ ರಾಜಕೀಯ ಪ್ರಾರಂಭಿಸಿದ್ದಾರೆ.
— BJP Karnataka (@BJP4Karnataka) February 9, 2022
ಬಿಜೆಪಿಯವರು ಸೂರತ್ನಿಂದ ಪೇಟಗಳನ್ನು ತರಿಸಿದ್ದಾರೆ ಎಂದು ಇನ್ನೊಂದು ಸುಳ್ಳು ಆರೋಪ ಮಾಡಿದ್ದಾರೆ.
ಡಿಕೆಶಿಯವರೇ, ಹಿಜಾಬ್ ವಿವಾದ ಮುಗಿಯುವವರೆಗೆ ಇನ್ನೆಷ್ಟು ಸುಳ್ಳು ಹೇಳುತ್ತೀರಿ?#AntiSocialDKS pic.twitter.com/gaWHmcIo0v