ಗಂಡನ ಮನೆಯಿಂದ ಮಗಳನ್ನ ತಂದೆಯೇ ಕಿಡ್ನಾಪ್ ಮಾಡಿದ ಆರೋಪ! | ಜನತಾ ನ್ಯೂಸ್
ಬೆಂಗಳೂರು : ಎರಡು ತಿಂಗಳ ಹಿಂದಷ್ಟೇ ಪ್ರೀತಿಸಿ ವಿವಾಹವಾಗಿರುವ ಈ ಜೋಡಿಯನ್ನು ಖುದ್ದು ಯಾಡುಗಿಯ ಪಾಲಕರೇ ಪ್ರತ್ಯೇಕ ಮಾಡಿರುವ ಆರೋಪ ಕೇಳಿಬಂದಿದೆ.
ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿಯ ನಿಖಿಲ್ ರಾಜ್ ಬೆಂಗಳೂರಿನ ಸಹಕಾರ ನಗರದ ನಿವಾಸಿ ಮಹಿಮಾ ಎಂಬುವರನ್ನು ಕಳೆದ ಎರಡು ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ಮದುವೆಯಾಗುವ ತೀರ್ಮಾನಕ್ಕೂ ಬಂದಿದ್ದರು. ಆದರೆ, ಈ ಮದುವೆಗೆ ಮಹಿಮಾ ಹೆತ್ತವರ ವಿರೋಧವಿತ್ತು.
ಇದರ ಹೊರತಾಗಿಯೂ ಮದುವೆಯಾದ ಹಿನ್ನೆಲೆಯಲ್ಲಿ ಮಹಿಮಾ ಪಾಲಕರು ಗಂಡನ ಮನೆಯಿಂದ ಮಗಳನ್ನು ಪ್ರೇಮಿಗಳ ದಿನದಂತೆ ಕಿಡ್ನಾಪ್ ಮಾಡಿರುವುದಾಗಿ ಹೇಳಲಾಗುತ್ತಿದೆ.
ಮದುವೆಗೆ ಹೆತ್ತವರ ವಿರೋಧವಿದ್ದ ಹಿನ್ನೆಲೆ ಫೆಬ್ರವರಿ 7ರಂದು ಸ್ವತಃ ಮಹಿಮಾ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ರಕ್ಷಣೆ ಕೋರಿ ದೂರು ನೀಡಿದ್ದರು. ತಾನು ಸ್ವಇಚ್ಛೆಯಿಂದ ಮದುವೆಯಾಗಿದ್ದೇನೆ. ಯಾರ ಬಲವಂತದಿಂದಲೂ ಮದುವೆಯಾಗಿಲ್ಲ, ಮದುವೆಗೂ ಮುನ್ನ ತನ್ನ ಪಾಲಕರು ಮದುವೆಗೆ ಅಡ್ಡಿ ಪಡಿಸುತ್ತಿರುವುದಾಗಿ ಖುದ್ದು ಮಹಿಮಾ ಅವರೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎನ್ನಲಾಗಿದೆ.
ಮಗಳ ಮದುವೆಗೆ ವಿರೋಧ ಒಡ್ಡಿದ್ದ ಹಿನ್ನೆಲೆಯಲ್ಲಿ ಮಹಿಮಾ ಪಾಲಕರೇ ಮಗಳನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಪತಿ ನಿಖಿಲ್ ದೂರಿದ್ದಾರೆ.