ರೈತ ಮುಖಂಡರ ರಹಸ್ಯ ಬಹಿರಂಗಪಡಿಸುವ ಬೆದರಿಕೆ ನೀಡಿದ್ದ, ದೀಪ್ ಸಿಧು ಅಪಘಾತದಲ್ಲಿ ಸಾವು | ಜನತಾ ನ್ಯೂಸ್
ನವದೆಹಲಿ : ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಆರೋಪಿ, ಎಂದು ಹೆಸರಿಸಲಾದ ಪಂಜಾಬಿ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಹರಿಯಾಣದ ಸೋನಿಪತ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸೋನಿಪತ್ ಪೊಲೀಸರು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ವಿವರಗಳನ್ನು ನಿರೀಕ್ಷಿಸಲಾಗಿದೆ.
2021ರ ಜನವರಿ 26ರಂದು ರೈತರ ಟ್ರ್ಯಾಕ್ಟರ್ ರ್ಯಾಲಿ ನೆಪದಲ್ಲಿ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಆರೋಪಿ, ಎಂದು ದೀಪ್ ಸಿಧು ಹೆಸರಿಸಲಾಗಿತ್ತು.
"ರೈತ ಮುಖಂಡರಿಗೆ ಅವರ ರಹಸ್ಯಗಳನ್ನು ಬಹಿರಂಗಪಡಿಸುವ ಬೆದರಿಕೆ ನೀಡಿದ್ದ", ದೀಪ್ ಸಿಧು ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದನ್ನು ಹಂಚಿಕೊಂಡಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಕಳೆದ ವರ್ಷದ ಜನವರಿಯ ಕೊನೆಯಲ್ಲಿ ವರದಿ ಮಾಡಿತ್ತು.
ಅಪಘಾತದ ಸ್ಥಳದಿಂದ ಕಾರಿನ ದೃಶ್ಯಗಳಲ್ಲಿ ಕಾರೊಂದು ಟ್ರಕ್ ಗೆ ಹಿಂದಿನಿಂದ ಗುದ್ದಿರುವುದು ಕಂಡು ಬಂದಿದೆ. ಪಂಜಾಬಿ ನಟ ದೀಪ್ ಸಿಧು ಅವರು ಕುಂಡ್ಲಿ-ಮನೇಸರ್-ಪಲ್ವಾಲ್ (ಕೆಎಂಪಿ) ಎಕ್ಸ್ಪ್ರೆಸ್ವೇಯಲ್ಲಿ ಪಿಪ್ಲಿ ಟೋಲ್ ಬಳಿ ನಿಂತಿದ್ದ ಟ್ರಕ್ಗೆ ತಮ್ಮ ಕಾರನ್ನು ಡಿಕ್ಕಿ ಹೊಡೆದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ ಎಂದು ಎಏನ್ಐ ಟ್ವೀಟ್ ಮಾಡಿದೆ.
ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಅವರು "ಖ್ಯಾತ ನಟ ಮತ್ತು ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಅವರ ದುರದೃಷ್ಟಕರ ನಿಧನಕ್ಕೆ" ಸಂತಾಪ ಸೂಚಿಸಿದ್ದಾರೆ.