ಪಂಜಾಬ್ ಚುನಾವಣೆ : ಕಾಂಗ್ರೆಸ್ ಪಕ್ಷದೊಳಗೆ ಮುಖಂಡರ ಪರಸ್ಪರ ವಾಕ್ ಸಮರ | ಜನತಾ ನ್ಯೂಸ್
ನವದೆಹಲಿ : ಪಂಜಾಬ್ ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಮುಖಂಡರ ಪರಸ್ಪರ ವಾಕ್ ಸಮರ ನಡೆಸಿರುವುದು ಗೊಂದಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಂಜಾಬ್ ನ ರೂಪನಗರ ದಲ್ಲಿ ಪ್ರಚಾರದ ವೇಳೆ ಮಾತನಾಡಿ, "ವೇದಿಕೆಯ ಮೇಲೆ ಪೇಟ ಧರಿಸುವುದರಿಂದ ಯಾರೂ ಸರ್ದಾರ್ ಆಗುವುದಿಲ್ಲ ಎಂದು ಅವರಿಗೆ ಹೇಳಿ. ನಿಜವಾದ ಸರ್ದಾರ್ ಯಾರು ಎಂದು ಅವರಿಗೆ ಹೇಳಿ. ಈ ಪೇಟದಲ್ಲಿರುವ ಶ್ರಮ ಮತ್ತು ಧೈರ್ಯವನ್ನು ಹೇಳಿ. ಪಂಜಾಬ್ ಪಂಜಾಬಿಗಳಿಗೆ ಸೇರಿದ್ದು ಎಂದು ಹೇಳಿ ಮತ್ತು ಅವರೇ ಅದನ್ನು ನಡೆಸುತ್ತಾರೆ..", ಎಂದು ಬಿಜೆಪಿ ಮತ್ತು ಆಪ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕಾಂಗ್ರೆಸ್ ಜಿ23 ಸದಸ್ಯ ಮನೀಶ್ ತಿವಾರಿ ಅವರು ಮಾತನಾಡಿ, "ಪೇಟ ಪಂಜಾಬ್ನ ಹೆಮ್ಮೆ ಮತ್ತು ಅದನ್ನು ಧರಿಸುವುದರಲ್ಲಿ ಯಾವುದೇ ರಾಜಕೀಯ ಬೇಡ", ಎಂದು ಬುದ್ಧಿಮಾತು ಹೇಳಿದ್ದಾರೆ.
ಇತ್ತೀಚಿಗೆ ಪಂಜಾಬ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಸಿಖ್ ಪೇಟ ದರಿಸಿದ ವಿಷಯ ಸಾಕಷ್ಟು ಜನರ ಗಮನ ಸೆಳೆದಿತ್ತು ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೆಜ್ರಿವಾಲ್ ಕೂಡ ಸಾಮಾನ್ಯವಾಗಿ ಪ್ರಚಾರದ ಸಂದರ್ಭದಲ್ಲಿ ಸಿಖ್ ಪೇಟ ಧರಿಸುತ್ತಿದ್ದರು.