ಸ್ವತಂತ್ರ ರಾಷ್ಟ್ರದ(ಖಾಲಿಸ್ತಾನ್) ಮೊದಲ ಪ್ರಧಾನಿಯಾಗುತ್ತೇನೆ ಎಂದ ಕೇಜ್ರಿವಾಲ್ - ಮಾಜಿ ಆಪ್ ಮುಖಂಡನ ಹೊಸ ಬಾಂಬ್ | ಜನತಾ ನ್ಯೂಸ್
ನವದೆಹಲಿ : ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ನಲ್ಲಿ ಚುನಾವಣಾ ಲಾಭ ಗಳಿಸಲು ಖಾಲಿಸ್ತಾನಿ ಭಯೋತ್ಪಾದಕ ಸಂಘಟನೆಯನ್ನು ಬೆಂಬಲದೊಂದಿಗೆ ಸ್ವತಂತ್ರ ರಾಜ್ಯದ ಮುಖ್ಯಮಂತ್ರಿ ಅಥವಾ ಸ್ವತಂತ್ರ ಖಾಲಿಸ್ತಾನಿ(ಪಂಜಾಬ್) ರಾಷ್ಟ್ರದ ಮೊದಲ ಪ್ರಧಾನಿಯಾಗುತ್ತೇನೆ, ಎಂದು ಒಮ್ಮೆ ಹೇಳಿದ್ದರು ಎಂದು ಆಮ್ ಆದ್ಮಿ ಪಕ್ಷದ ಮಾಜಿ ನಾಯಕ ಕುಮಾರ್ ವಿಶ್ವಾಸ್ ಬಹಿರಂಗ ಪಡಿಸಿದ್ದು, ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವಿನ ನೇರ ಸ್ಪರ್ಧೆಯಲ್ಲಿ ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಪಂಜಾಬ್ ಚುನಾವಣೆಗೆ ಹೋಗುವ ಮೂರು ದಿನಗಳ ಮೊದಲು ಈ ಆರೋಪ ಬಂದಿದ್ದು, ಕಾಂಗ್ರೆಸ್ ಈ ಆರೋಪದ ಸಂಪೂರ್ಣ ಲಾಭ ಪಡೆಯಲು ಮುಂದಾಗಿದ್ದು, ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ.
"ಒಂದು ದಿನ, ತಾನು ಮುಖ್ಯಮಂತ್ರಿ(ಪಂಜಾಬ್) ಅಥವಾ ಸ್ವತಂತ್ರ ರಾಷ್ಟ್ರದ(ಖಾಲಿಸ್ತಾನ್) ಮೊದಲ ಪ್ರಧಾನಿಯಾಗುತ್ತೇನೆ ಎಂದು ಅವರು ನನಗೆ ಹೇಳಿದರು" ಎಂದು ವಿಶ್ವಾಸ್ ಸುದ್ದಿ ಸಂಸ್ಥೆ ಎಏನ್ಐ ನೊಂದಿಗೆ ಮಾತನಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
ಉಗ್ರಗಾಮಿಗಳು, ಯಾರು ಖಾಲಿಸ್ತಾನಿ ಸಂಘಟನೆಗೆ ಸೇರಿದ್ದವರ ಸಹಕಾರ ತೆಗೆದುಕೊಳ್ಳುವುದು ಬೇಡ, ಎಂದು ಕಳೆದ ಚುನಾವಣೆ ಸಂದರ್ಭದಲ್ಲಿ ನಾನು ಅವರಿಗೆ ಹೇಳಿದ್ದೆ. ಆದರೆ ಅವರು, ಪರವಾಗಿಲ್ಲ ನಡಿಯುತ್ತದೆ, ಚಿಂತೆ ಮಾಡಬೇಡ, ಎಂದಿದ್ದರು. ಅಲ್ಲದೇ, ತಮ್ಮ ಸಂಚನ್ನು ಹಂಚಿಕೊಂಡು, ಭಗವಂತ ಅವರು ಮತ್ತು ಪುಲ್ಕಾ ಅವರೊಳಗೆ ಜಗಳ ಹಚ್ಚಿಸಿ ನಾನು ಗೆಲ್ಲುತ್ತೇನೆ, ಎಂದನು, ಇಲ್ಲಾ ಎಂದರೆ ಯಾರಾದರೂ ಕೈಗೊಂಬೆ ಯನ್ನು ಕುರ್ಚಿ(ಸಿಎಂ)ಗೆ ಆಯ್ಕೆ ಮಾಡುತ್ತಾನೆ.", ಎಂದು ವಿಶ್ವಾಸ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅವರು(ಕೇಜ್ರಿವಾಲ್) ನನಗೆ ಎಂತಹ ಭಯಾನಕ ಮಾತು ಹೇಳಿದರೆಂದರೆ, ಪಂಜಾಬ್ನಲ್ಲಿ ಎಲ್ಲರಿಗೂ ಗೊತ್ತಿದೆ, ಅವರು ಹೇಳಿದರು, "ನಾನು ಸ್ವತಂತ್ರ ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ", ಆಗ ನಾನು ಕೇಳಿದೆ, "ಐಎಸ್ಐಎಸ್ ಸೇರಿದಂತೆ ಜಗತ್ತಿನ ಎಲ್ಲಾ ಉಗ್ರಗಾಮಿ ಸಂಸ್ಥೆ ಹಣ ಸಹಾಯ ಮಾಡುತ್ತಿದೆ", ಎಂದು. ಅದಕ್ಕೆ ಅವರು(ಕೇಜ್ರಿವಾಲ್) ಹೇಳಿದರು, "ಅದರಲ್ಲೇನಂತೆ, ಹಾಗಾದರೆ ನಾನು ಸ್ವತಂತ್ರ ರಾಷ್ಟ್ರದ(ಖಾಲಿಸ್ತಾನ್) ಮೊದಲ ಪ್ರಧಾನಿಯಾಗುತ್ತೇನೆ", ಎಂದು ಹೇಳಿದ್ದಾನೆ.
ಈ ವ್ಯಕ್ತಿಯ ವಿಚಾರದಲ್ಲಿ ಉಗ್ರವಾದದ ಕುರಿತು, ಅಂದರೆ, ಅಧಿಕಾರಕ್ಕೆ ಬರಲು, ಸರ್ಕಾರ ಸಿಗಲು ಯಾವುದೇ ಬೆಲೆ ತೆರಲು ಸಿದ್ದ", ಎಂದು ಕುಮಾರ್ ವಿಶ್ವಾಸ್ ಹೇಳಿದರು.