ಕೇಂದ್ರ ಸರ್ಕಾರದ ಮಧ್ಯಪ್ರವೇಶದ ಬಳಿಕ ತಮಿಳುನಾಡಿನ 47 ಮೀನುಗಾರರನ್ನು ಬಿಡುಗಡೆ ಮಾಡಿದ ಶ್ರೀಲಂಕಾ | ಜನತಾ ನ್ಯೂಸ್
ನವದೆಹಲಿ : ಶ್ರೀಲಂಕಾ ನೌಕಾಪಡೆಯಿಂದ ಬಂಧನಕ್ಕೊಳಕ್ಕಾಗಿದ್ದ ಕನಿಷ್ಠ 47 ಮೀನುಗಾರರು ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದ ಮಧ್ಯಪ್ರವೇಶದ ನಂತರ ಶ್ರೀಲಂಕಾದಿಂದ ಬಿಡುಗಡೆಗೊಂಡು ಶುಕ್ರವಾರ ಬೆಳಿಗ್ಗೆ ಚೆನ್ನೈಗೆ ಆಗಮಿಸಿದ್ದಾರೆ.
ತಮಿಳುನಾಡಿನ ರಾಮೇಶ್ವರಂ, ನಾಗಪಟ್ಟಣಂ ಮತ್ತು ಪುದುಕೊಟ್ಟೈ ಜಿಲ್ಲೆಗಳಿಗೆ ಸೇರಿದ ಈ ಮೀನುಗಾರರು ಇಂದು ಶುಕ್ರವಾರ ಶ್ರೀಲಂಕಾದಿಂದ ಭಾರತಕ್ಕೆ ಮರಳಿದ್ದಾರೆ.
2021ರ ಡಿಸೆಂಬರ್ನಲ್ಲಿ ಮೀನುಗಾರಿಕೆಗೆ ಸಮುದ್ರದಲ್ಲಿ ತೆರಳಿದ ಇವರನ್ನು ಶ್ರೀಲಂಕಾ ನೌಕಾಪಡೆ ತಮ್ಮ ಸಮುದ್ರ ಪ್ರದೇಶದಲ್ಲಿ ಬಂಧಿಸಿತ್ತು. ಈ ಸಂದರ್ಭದಲ್ಲಿ ಭಾರತೀಯ ಮೀನುಗಾರರಿಂದ ಒಂಬತ್ತು ದೋಣಿಗಳು, ಮೀನುಗಾರಿಕೆ ಬಲೆಗಳು ಮತ್ತು ಇತರ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಮೀನುಗಾರರನ್ನು ಶ್ರೀಲಂಕಾದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು ಜೈಲಿನಲ್ಲಿ ಇರಿಸಲಾಯಿತು, ಎಂದು ಸುದ್ದಿ ಸಂಸ್ಥೆ ಎಎಏನ್ಐ ವರದಿ ಮಾಡಿತ್ತು.