ಹರ್ಷನ ಕೊಲೆ ಕೇಸ್ಗೆ ಸ್ಫೋಟಕ ತಿರುವು: ಹತ್ಯೆಗೂ ಮುನ್ನ ಬಂದಿತ್ತು ಇಬ್ಬರು ಹುಡುಗಿಯರ ವಿಡಿಯೋ ಕಾಲ್ | ಜನತಾ ನ್ಯೂಸ್
ಶಿವಮೊಗ್ಗ : ಭಜರಂಗ ದಳದ ಕಾರ್ಯಕರ್ತ ಹರ್ಷನ ಕೊಲೆ ಕೇಸ್ಗೆ ಸ್ಫೋಟಕ ತಿರುವು ಸಿಕ್ಕಿದೆ. ಹತ್ಯೆಗೂ ಮುನ್ನ ಹರ್ಷನ ಮೊಬೈಲ್ಗೆ ಹುಡುಗಿಯರಿಬ್ಬರು ಕರೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೊಲೆಯಾಗುವುದಕ್ಕೂ ಮೊದಲು ಆ ಇಬ್ಬರು ಹುಡುಗಿಯರು ಕರೆ ಮಾಡುತ್ತಿದ್ದರು. ನಮಗೆ ಸಮಸ್ಯೆಯಾಗಿದೆ ಸಹಾಯ ಮಾಡಿ ಎಂದು ಕರೆ ಮಾಡಿದ್ದರು. ಅವರ ಸಹಾಯಕ್ಕಾಗಿ ತೆರಳಿದ್ದಾಗ ಅನಾಹುತ ನಡೆದಿದೆ ಎಂಬ ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ.
ಹರ್ಷ ಕೊಲೆಯ ಕೊನೆಯ ಕ್ಷಣದಲ್ಲಿ ಹರ್ಷ ಹತ್ಯೆಗಾಗಿ ಪದೇ ಪದೇ ಅನಾಮಧೇಯ ಕರೆಯನ್ನು ಮಾಡಲಾಗಿರೋದಾಗಿ ಸ್ಪೋಟಕ ಮಾಹಿತಿಯನ್ನು ಹರ್ಷ ಸ್ನೇಹಿತ ಬಿಚ್ಚಿಟ್ಟಿದ್ದಾನೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಹರ್ಷ ಸ್ನೇಹಿತ ನವೀನ್ ಎಂಬಾತ, ಕೊಲೆಗೂ ಮುನ್ನಾ ಪದೇ ಪದೇ ವೀಡಿಯೋ ಕಾಲ್ ಒಂದು ಹುಡುಗಿ ಮಾಡ್ತಾ ಇದ್ದರು. ಏನೋ ಸಮಸ್ಯೆಯಲ್ಲಿ ಇರೋದಾಗಿ ಹೇಳುತ್ತಿದ್ದರು. ಗಾಡಿ ತಗೊಂಡು ಹೋಗೋಣ ಅಂತ ಹೇಳಿದೆ. ಬೇಡ ಬನ್ನಿ ಏನೋ ಸಮಸ್ಯೆಯಲ್ಲಿ ಇರಬೇಕು. ಹಾಗೇ ನಡೆದುಕೊಂಡು ಹೋಗೋಣ ಅಂತ ಹೋದ್ವಿ.
ವೀಡಿಯೋ ಕಾಲ್ ಮಾಡಿದಂತ ಇಬ್ಬರು ಯುವತಿಯರನ್ನು ನಾನು ನಿಮ್ಮನ್ನು ನೋಡಿಯೇ ಇಲ್ಲ ಎಂದರು. ಪದೇ ಪದೇ ಅವರ ಕರೆಯನ್ನು ಹರ್ಷ ಕಟ್ ಮಾಡುತ್ತಿದ್ದನು. ಸ್ವಲ್ಪ ದೂರ ಹೋದ ಬಳಿಕ, ಯಾಕೋ ಸರಿಯಾಗ್ತಾ ಇಲ್ಲ. ಹೋಗಿ ನೀವು ಗಾಡಿ ತಗೊಂಡು ಬನ್ನಿ ಎಂದು ಹರ್ಷ ಕಳಿಸಿದನು. ಆಗ ನಾವನು, ಮಂಜ, ಅನಂತ ಗಾಡಿ ತಗೊಂಡು ಬರೋದಕ್ಕೆ ವಾಪಾಸ್ ಬಂದಾಗ ನಮಗೆ ಕರೆ ಬಂತು, ಹರ್ಷನನ್ನು ಓಡಿಸಿಕೊಂಡು ಹತ್ಯೆ ಮಾಡೋದಕ್ಕೆ ಹೋಗುತ್ತಿರೋದಾಗಿ ಕರೆ ಬಂತು ಎಂದರು.
ಈ ಮಧ್ಯೆ, ಹರ್ಷನ ಮೊಬೈಲ್ ಪತ್ತೆ ಆಗದಿರುವುದು ನಿಗೂಢವಾಗಿದೆ. ಹರ್ಷನ ಮೊಬೈಲ್ ಎಲ್ಲಿದೆ ಅನ್ನೊದು ಇನ್ನೂ ಗೊತ್ತಾಗಿಲ್ಲ. ಹರ್ಷನ ಮೊಬೈಲ್ ಆರೋಪಿಗಳ ಬಳಿ ಇದೆಯೇ? ಹುಡುಗಿಯರನ್ನು ಕೊಲೆಗೆ ಬಳಸಿಕೊಂಡರೇ ಆರೋಪಿಗಳು? ಸಹಾಯ ಕೇಳುವ ನೆಪದಲ್ಲಿ ಕರೆ ಮಾಡಿದ್ದರಾ ಆ ಹುಡುಗಿಯರು? ಯಾರು ಏನೂ ಎಂದು ವಿಚಾರಿಸಿದರೂ ಆ ಹುಡುಗಿಯರು ಉತ್ತರಿಸಿರಲಿಲ್ಲ ಎಂದು ತಿಳೀದುಬಂದಿದೆ.