ದಾವೂದ್ ಇಬ್ರಾಹಿಂ ಅಕ್ರಮ ಹಣ ವರ್ಗಾವಣೆ : ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಪುತ್ರ ಫರಾಜ್ ಮಲಿಕ್ಗೆ ಇಡಿ ಸಮನ್ಸ್ | ಜನತಾ ನ್ಯೂಸ್
ಮುಂಬೈ : ಮಹಾರಾಷ್ಟ್ರ ಸಚಿವ ಹಾಗೂ ಎನ್ಸಿಪಿ ಹಿರಿಯ ಮುಖಂಡ ನವಾಬ್ ಮಲಿಕ್ ಅವರ ಪುತ್ರ ಫರಾಜ್ ಮಲಿಕ್ಗೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ಜಾರಿ ಮಾಡಿದೆ.
ಭಾರತದಿಂದ ಪಲಾಯನ ಮಾಡಿರುವ ಭೂಗತಪಾತಕಿ ದಾವೂದ್ ಇಬ್ರಾಹಿಂ ಗೆ ಸಂಬಂಧಪಟ್ಟ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ನವಾಬ್ ಮಲಿಕ್ ಪುತ್ರ ಫರಾಜ್ ಮಲಿಕ್ಗೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ನೀಡಿದೆ.
ದಾವೂದ್ ಇಬ್ರಾಹಿಂ ಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಸಮನ್ಸ್ ಗೆ ಪ್ರತಿಕ್ರಿಯೆ ನೀಡಿರುವ ಫರಾಜ್ ಮಲಿಕ್ ಪರ ವಕೀಲರು ತನಿಖಾ ಸಂಸ್ಥೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಒಂದು ವಾರ ಕಾಲಾವಕಾಶ ಕೋರಿದ್ದಾರೆ. ಆದರೆ, ಇಡಿ ಮನವಿಯನ್ನು ನಿರಾಕರಿಸಿದೆ, ಎಂದು ವರದಿಯಾಗಿದೆ.
ಕಳೆದ ವಾರ ಮಹಾರಾಷ್ಟ್ರ ಸಚಿವ ಹಾಗೂ ಎನ್ಸಿಪಿ ಹಿರಿಯ ಮುಖಂಡ ನವಾಬ್ ಮಲಿಕ್ ಅವರನ್ನು ಇಡಿ ವಶಕ್ಕೆ ಪಡೆದುಕೊಂಡ ಬೆನ್ನಲ್ಲೇ ಅವರ ಮಗನಿಗೆ ನೀಡಿರುವ ಸಮನ್ಸ್ ಪ್ರಕರಣದಲ್ಲಿ ಮುಂದುವರೆದ ತನಿಖೆಯ ಭಾಗವಾಗಿದೆ ಎನ್ನಲಾಗಿದೆ.