ಭಾರತದ ಧ್ವಜ ಹಿಡಿದು ಸುರಕ್ಷಿತವಾಗಿ ಪಾರಾದ ಪಾಕಿಸ್ತಾನಿ ವಿದ್ಯಾರ್ಥಿಗಳು! | ಜನತಾ ನ್ಯೂಸ್
ಉಕ್ರೇನ್ : ಯುದ್ಧಪೀಡಿತ ಉಕ್ರೇನ್ನಲ್ಲಿ ವಿವಿಧ ದೇಶಗಳ ವಿದ್ಯಾರ್ಥಿಗಳು, ಪ್ರಜೆಗಳಿಗೆ ನಮ್ಮ ಭಾರತ ದೇಶದ ತ್ರಿವರ್ಣ ಧ್ವಜ ಪಾರಾಗಲು ನೆರವಾಗಿದೆ
ಇದರ ಬಗ್ಗೆ ಅಲ್ಲಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಹೇಳಿದ್ದಾರೆ. ಭಾರತದ ರಾಷ್ಟ್ರೀಯ ತ್ರಿವರ್ಣ ಧ್ವಜವು ಉಕ್ರೇನ್ನಲ್ಲಿದ್ದ ಭಾರತೀಯರಲ್ಲದೇ ಬೇರೆ ದೇಶದ ನಾಗರಿಕರು ಸಹ ಅಲ್ಲಿಂದ ಸುರಕ್ಷಿತವಾಗಿ ಪಾರಾಗಲು ನೆರವಾಗಿದೆ. ಉಕ್ರೇನ್ನಿಂದ ಹೊರಗೆ ದಾಟಲು ಪಾಕಿಸ್ತಾನ ಮತ್ತು ಟರ್ಕಿ ವಿದ್ಯಾರ್ಥಿಗಳಿಗೂ ಸಹ ರಾಷ್ಟ್ರೀಯ ತ್ರಿವರ್ಣ ಧ್ವಜ ರಕ್ಷಣೆ ನೀಡಿದೆ.
ಉಕ್ರೇನ್ನಿಂದ ರೊಮೇನಿಯಾದ ಬುಕಾರೆಸ್ಟ್ ನಗರಕ್ಕೆ ಆಗಮಿಸಿದ ಭಾರತೀಯ ವಿದ್ಯಾರ್ಥಿಗಳು, ರಾಷ್ಟ್ರೀಯ ತ್ರಿವರ್ಣ ಧ್ವಜವು ತಮಗೆ ಮತ್ತು ಕೆಲವು ಪಾಕಿಸ್ತಾನಿ, ಟರ್ಕಿಶ್ ವಿದ್ಯಾರ್ಥಿಗಳಿಗೆ ಯುದ್ಧ ಪೀಡಿತ ದೇಶದ ವಿವಿಧ ಚೆಕ್ಪೋಸ್ಟ್ಗಳನ್ನು ಸುರಕ್ಷಿತವಾಗಿ ದಾಟಲು ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.
ಭಾರತದ ಆಪರೇಷನ್ ಗಂಗಾ ಯೋಜನೆಯ ವಿಶೇಷ ವಿಮಾನದಲ್ಲಿ ದಕ್ಷಿಣ ಉಕ್ರೇನ್ನ ಒಡೆಸಾದಿಂದ ಆಗಮಿಸಿದ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ANIಯೊಂದಿಗೆ ಮಾತನಾಡುತ್ತಾ, ಉಕ್ರೇನ್ನಲ್ಲಿ ಭಾರತೀಯರಿಗೆ ಮತ್ತು ಭಾರತೀಯ ಧ್ವಜವನ್ನು ಹೊತ್ತಿರುವವರಿಗೆ ಯಾವುದೇ ತೊಂದರೆಗಳನ್ನು ಮಾಡುವುದಿಲ್ಲ ಎಂದು ನಮಗೆ ಗೊತ್ತಾಯಿತು.
ಹೀಗಾಗಿ ಅಲ್ಲಿಂದ ಟ್ಯಾಕ್ಸಿ ಇನ್ನಿತರ ವಾಹನಗಳಿಗೆ ವಿದ್ಯಾರ್ಥಿಗಳು ಭಾರತದ ತ್ರಿವರ್ಣ ಧ್ವಜ ಹಾಕಿಕೊಂಡು ಬರುತ್ತಿದ್ದರು. ಆಗ ರಷ್ಯಾದ ಯಾವೊಬ್ಬ ಸೈನಿಕರು ವಾಹನವನ್ನು ತಡೆಯುತ್ತಿರಲಿಲ್ಲ ಮತ್ತು ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ. ಅದನ್ನು ಮೈಮೇಲೆ ಹೊದ್ದ ಕಾರಣದಿಂದ ನಾವು ಸುರಕ್ಷಿತವಾಗಿ ಚೆಕ್ಪೋಸ್ಟ್ಗಳನ್ನು ದಾಟಿ ಬಂದೆವು ಎಂದು ವಿವರಿಸಿದ್ದಾರೆ.
The #Indian students who arrived in the city of #Bucharest in #Romania from #Ukraine said that the national tricolour helped them as well as some #Pakistani and #Turkish students in safely crossing the various checkpoints in the war-torn country. pic.twitter.com/FlDWVoPZb2
— J&Kviews (@JKviews07) March 2, 2022
Indian tricolour came to rescue of fleeing Pakistani, Turkish students from Ukraine
— ANI Digital (@ani_digital) March 2, 2022
Read @ANI Story | https://t.co/28IKvaLcEq
#OperationGanga #UkraineRussiaConflict #evacuation pic.twitter.com/p67p38NCCZ