ಉಕ್ರೇನ್ ಒಳಗೆ ಕಾಲಿಡೋಕೆ ಇಂಡಿಯನ್ ಗವರ್ನಮೆಂಟ್ ಗೆ ಗಟ್ಸ್ ಇಲ್ಲ ಎಂದ ಅನೀಷ್ ವಿರುದ್ಧ ಜನಾಕ್ರೋಶ | ಜನತಾ ನ್ಯೂಸ್
ಬೆಂಗಳೂರು : ಆಪರೇಷನ್ ಗಂಗಾ ಅಡಿಯಲ್ಲಿ ರಕ್ಷಿಸಿ ಭಾರತಕ್ಕೆ ಕರೆತಂದು ಬೆಂಗಳೂರು ತಲುಪಿದ ಬಳಿಕ ಅನೀಶ್ ಎನ್ನುವ ಹುಡುಗ ಬೆಂಗಳೂರು ವಿಮಾನ ತಲುಪಿದ ಬಳಿಕ ಉಕ್ರೇನ್ ಒಳಗೆ ಕಾಲಿಡೋಕೆ ಇಂಡಿಯನ್ ಗವರ್ನಮೆಂಟ್ ಗೆ ಗಟ್ಸ್ ಇಲ್ಲ ಎಂದು ಟೀಕೆ ಮಾಡಿದ ಅನೀಷ್ ಎನ್ನುವ ಬೆಂಗಳೂರಿನ ಗಿರಿನಗರದ ಹುಡುಗನ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.
ಈ ಹುಡುಗನ ವೀಡಿಯೊ ತುಣುಕುಗಳನ್ನು ಹಂಚಿಕೊಂಡು ಕೆಲವರು ಈತನಿಗೆ ಅವಾಚ್ಯ ಶಬ್ದಗಳಿಂದ ಬೈದರೇ, ಇನ್ನೂ ಕೆಲವರು ಈತನಿಗೆ ಸರಿಯಾದ ಬುದ್ಧಿ ಹೇಳಿಕೊಡದ ಪೋಷಕರನ್ನು ಮನಸೋ ಇಚ್ಛೆ ಬೈದಿದ್ದಾರೆ, ಇನ್ನೂ ಕೆಲವರು ದೇಶದ್ರೋಹಿ ಎಂದೂ ಕೂಡ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಯುದ್ಧ ಪರಿಸ್ಥಿತಿ ಎದುರಿಸುತ್ತಿರುವ ಉಕ್ರೇನ್ ನಲ್ಲಿ ಬಸ್ ಪ್ರಯಾಣಕ್ಕಾಗಿ ತಾನು ಸುಮಾರು 6 ಸಾವಿರ ರೂಪಾಯಿಯಷ್ಟು ಖರ್ಚು ಮಾಡಿರುವ ಬಗ್ಗೆ, ಹಾಗೆಯೇ ರಾಯಭಾರಿ ಕಚೇರಿ ಅಧಿಕಾರಿಗಳು ಅರ್ಧ ಗಂಟೆ ತಡವಾಗಿ ಕರೆ ಮಾಡಿದ್ದಕ್ಕೆ ಮತ್ತು ಅಧಿಕಾರಿಗಳು 5 ಗಂಟೆ ತಡವಾಗಿ ಬಂದು ಕಾಯಿಸಿದ್ದ, ಕುರಿತು ವಿಶೇಷವಾಗಿ ಅಕ್ರೋಶ ವ್ಯಕ್ತಪಡಿಸಿರುವ ಇತನು ಪೂರ್ವ ಉಕ್ರೇನ್ ಒಳಗೆ ಕಾಲಿಡೋಕೆ ಇಂಡಿಯನ್ ಗವರ್ನಮೆಂಟ್ ಗೆ ಗಟ್ಸ್ ಇಲ್ಲ. ಎಂದು ತನ್ನ ಉದ್ದಟತನ ಪ್ರದರ್ಶಿಸಿದ್ದಾನೆ, ಎಂದು ಸಾಕಷ್ಟು ಜನರು ಚಿಮಾರಿ ಹಾಕಿದ್ದಾರೆ.
ಉಕ್ರೇನ್-ರಷ್ಯಾ ನಡುವೆ ಯುದ್ಧ ಆರಂಭಗೊಂಡಾಗಿನಿಂದ ಇಲ್ಲಿಯವರೆಗೆ ವಿದ್ಯಾರ್ಥಿಗಳೂ ಸೇರಿದಂತೆ ಸಾವಿರಾರು ಭಾರತಿಯರನ್ನು ರಕ್ಷಿಸಲು ಮುಂದಾಗಿದೆ ಭಾರತ ಸರ್ಕಾರ. ಪ್ರಪಂಚದ ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ಅಮೇರಿಕ ಸೇರಿದಂತೆ ಮುಂದುವರೆದ ರಾಷ್ಟ್ರಗಳೆಲ್ಲವೂ ಉಕ್ರೇನ್ ನಲ್ಲಿ ಸಿಲುಕಿರುವ ತಮ್ಮ ನಾಗರಿಕರಿಗೆ ಯಾವುದೇ ಸಹಾಯ ನೀಡದೆ ಸ್ವಂತ ವ್ಯವಸ್ಥೆ ಮಾಡಿಕೊಳ್ಳಲು ಹೇಳಿದೆ.
ಅಮೇರಿಕಾದಂತ ದೇಶವೇ ತನ್ನ ಉಕ್ರೇನ್ ನಲ್ಲಿದ್ದ ಎಂಬೆಸಿ ಖಾಲಿ ಮಾಡಿ ಕೈಚೆಲ್ಲಿ ಕುಳಿತಿದೆ. ಯಾವ ದೇಶದ ವಿಮಾನಗಳೂ ಹಾರಾಟವನ್ನೇ ನಡೆಸದಂತಹ ಗಡಿ ಪ್ರದೇಶಗಳಿಗೆ ಕೇವಲ ಭಾರತದ ವಿಮಾನಗಳು, 4 ಕೇಂದ್ರ ಮಂತ್ರಿಗಳು ಹೋಗಿ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ.
ಸ್ವತಃ ಪ್ರಧಾನಿಯೇ ಮೇಲ್ವಿಚಾರಣೆಯಲ್ಲಿದ್ದು, ರಷ್ಯಾ ಸೇರಿದಂತೆ ಇತರ ದೇಶದ ಮುಖ್ಯಸ್ಥರೊಂದಿಗೆ ಸಂಪರ್ಕಿಸಿ ಭಾರತಿಯರ ರಕ್ಷಣೆಗೆ ಒತ್ತಾಯಿಸುತ್ತಿದ್ದಾರೆ.
ಪ್ರಪಂಚದಲ್ಲೆಡೆ ಭಾರತದ ಪ್ರಯತ್ನದ ಬಗ್ಗೆ ಭಾರಿ ಮೆಚ್ಚುಗೆಯಿದೆ, ಶತ್ರು ರಾಷ್ಟ್ರಗಳಾದ ಚೀನಾ, ಪಾಕಿಸ್ತಾನದ ನಾಗರಿಕರೇ ಭಾರತ ಸರ್ಕಾರವನ್ನು ಕೊಂಡಾಡುತ್ತಿದ್ದಾರೆ, ಅಲ್ಲದೇ ಭಾರತದ ಧ್ವಜವನ್ನು ತಮ್ಮ ರಕ್ಷಣೆಗೆ ಬಳಸುತ್ತಿದ್ದಾರೆ.