1999ರಲ್ಲಿ ಏರ್ ಇಂಡಿಯಾ ವಿಮಾನವನ್ನು ಹೈಜಾಕ್ ಮಾಡಿದ ಭಯೋತ್ಪಾದಕನ ಕರಾಚಿಯಲ್ಲಿ ಹತ್ಯೆ | ಜನತಾ ನ್ಯೂಸ್
ಕರಾಚಿ : 1999 ರಲ್ಲಿ ಏರ್ ಇಂಡಿಯಾ ವಿಮಾನವನ್ನು ಹೈಜಾಕ್ ಮಾಡಿದ ಭಯೋತ್ಪಾದಕರಲ್ಲಿ ಒಬ್ಬನಾದ ಜಹೂರ್ ಮಿಸ್ತ್ರಿ ಅಲಿಯಾಸ್ ಜಾಹಿದ್ ಅಖುಂಡ್ ಪಾಕಿಸ್ತಾನದ ಕರಾಚಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆ. ಮಾರ್ಚ್ 1 ರಂದು ಬೈಕ್ನಲ್ಲಿ ಬಂದ ಇಬ್ಬರು ಹಂತಕರು ನಡೆಸಿದ ದಾಳಿಯಲ್ಲಿ ಅವರು ತಮ್ಮ ಮನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇಂಡಿಯನ್ ಏರ್ಲೈನ್ಸ್ ಐಸಿ-814 ಅಪಹರಣಕಾರ ಜಹೂರ್ ಮಿಸ್ತ್ರಿ ಅಲಿಯಾಸ್ ಜಾಹಿದ್ ಅಖುಂಡ್ ಪಾಕಿಸ್ತಾನದಲ್ಲಿ ಪೀಠೋಪಕರಣ ವ್ಯವಹಾರ ನಡೆಸುತ್ತಿದ್ದ. ಜೈಶ್ ಉನ್ನತ ಮುಖಂಡರು, ಪಾಕಿಸ್ತಾನದ ಆಶ್ರಯದಲ್ಲಿರುವ ಅತಿಹೆಚ್ಚು ಬೇಕಾಗಿರುವ ಭಯೋತ್ಪಾದಕರು ಈತನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಈ ಘಟನೆಯನ್ನು ವರದಿ ಮಾಡದಂತೆ ಪಾಕಿಸ್ತಾನದ ಮಾಧ್ಯಮಗಳನ್ನು ಕೇಳಲಾಗಿತ್ತು, ಎಂದು ಹೇಳಲಾಗಿದೆ.
1999ರಲ್ಲಿ, ಅಪಹರಣಕಾರರು IC-814 ವಿಮಾನದ 176 ಪ್ರಯಾಣಿಕರನ್ನು ಏಳು ದಿನಗಳವರೆಗೆ ಒತ್ತೆಯಾಳುಗಳಾಗಿ ಇರಿಸಿದ್ದರು. ವಿಮಾನವು ಕಠ್ಮಂಡುವಿನಿಂದ ಹೊರಟು ದೆಹಲಿಗೆ ಹೊರಟಿದ್ದ ವಿಮಾನವನ್ನು ಅಪಹರಿಸಿ ಅಫ್ಘಾನಿಸ್ತಾನದ ಕಂದಹಾರ್ಗೆ ಕೊಂಡೊಯ್ಯಲಾಗಿತ್ತು.
ಅಂದು ಭಾರತೀಯ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದ, ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ಭಯೋತ್ಪಾದಕ ಗುಂಪಿನ ನಾಯಕ ಅಲ್ ಉಮರ್ ಮುಜಾಹಿದ್ದೀನ್, ಮುಷ್ತಾಕ್ ಅಹ್ಮದ್ ಜರ್ಗರ್ ಮತ್ತು ಬ್ರಿಟಿಷ್ ಮೂಲದ ಅಲ್-ಖೈದಾ ನಾಯಕ ಅಹ್ಮದ್ ಒಮರ್ ಸಯೀದ್ ರಂತಹ ಉಗ್ರರನ್ನು ಜೈಲುಗಳಿಂದ ಬಿಡುಗಡೆ ಗೊಳಿಸಲು ಇಂಡಿಯನ್ ಏರ್ಲೈನ್ಸ್ ವಿಮಾನದ ಅಪಹರಣದ ಸಂಚು ರೂಪಿಸಲಾಗಿತ್ತು.