ಮರಳಿ ಬಂದಿರುವುದು ಮೋದಿಜಿಯವರ ಮಗ, ನನ್ನ ಮಗನಲ್ಲ - ಶ್ರೀನಗರದ ಸಂಜಯ್ ಪಂಡಿತ | ಜನತಾ ನ್ಯೂಸ್
ನವದೆಹಲಿ : ಮರಳಿ ಬಂದಿರುವುದು ಮೋದಿಜಿಯವರ ಮಗ, ನನ್ನ ಮಗನಲ್ಲ, ಎಂದು ನಾನು ಹೇಳಲು ಬಯಸುತ್ತೇನೆ. ಮೋದಿಜಿ ಅವನನ್ನು ವಾಪಸ್ ಕರೆತಂದಿದ್ದಾರೆ, ಎಂದು ಕಾಶ್ಮೀರದ ಶ್ರೀನಗರದ ಸಂಜಯ್ ಪಂಡಿತ ಆನಂದಭಾಷ್ಪ ಸುರಿಸುತ್ತ ಹೇಳಿದ್ದಾರೆ.
ಮರಳಿ ಬಂದಿರುವುದು ಮೋದಿಜಿಯವರ ಮಗ, ನನ್ನ ಮಗನಲ್ಲ, ಎಂದು ನಾನು ಹೇಳಲು ಬಯಸುತ್ತೇನೆ. ಮೋದಿಜಿ ಅವನನ್ನು ವಾಪಸ್ ಕರೆತಂದಿದ್ದಾರೆ. ನಮಗೆ ಯಾವುದೇ ಭರವಸೆ ಇರಲಿಲ್ಲ. ಸುಮಿ(ಉಕ್ರೇನ್)ಯಲ್ಲಿನ ಸನ್ನಿವೇಶಗಳನ್ನು ಗಮನಿಸಿದಾಗ ನಮಗೆ ಯಾವುದೇ ಭರವಸೆ ಉಳಿದಿರಲಿಲ್ಲ. ಧ್ರುವ್(ಮಗ)... ಅಲ್ಲಿ ಬದುಕುವುದೇ ತುಂಬಾ ಕಷ್ಟವಾಗಿತ್ತು. ನನ್ನ ಮಗನನ್ನು ಹಿಂದಿರುಗಿಸಿದ್ದಕ್ಕಾಗಿ ನಾನು ಭಾರತ ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ", ಎಂದು ಕಾಶ್ಮೀರದ ಶ್ರೀನಗರದ ಸಂಜಯ್ ಪಂಡಿತ ಸುಮಿಯಿಂದ ಹಿಂದಿರುಗಿದ ತನ್ನ ಮಗ ಧ್ರುವನನ್ನು ಸ್ವಾಗತಿಸಿದ್ದಾರೆ ಅವರು ಸುದ್ದಿ ಮಾಧ್ಯಮ ಎಏನ್ಐ ನೊಂದಿಗೆ ಮಾತನಾಡುತ್ತಿದರು.
ಯುದ್ಧ ಪೀಡಿತ ಉಕ್ರೇನ್ನಲ್ಲಿ ಸುಮಿಯಿಂದ ಹಿಂದಿರುಗಿದ ಧ್ರುವ್ ಮಾತನಾಡಿ, "ಅಲ್ಲಿ ಬದುಕುಳಿಯುವುದು ತುಂಬಾ ಕಷ್ಟಕರವಾಗಿತ್ತು. ಆದರೆ ಹಿಂತಿರುಗಲು ಸಮಾಧಾನವಾಯಿತು. ಆಪರೇಷನ್ ಗಂಗಾವನ್ನು ಕೈಗೊಂಡಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದಗಳು" ಎಂದು ಹೇಳುದ್ದಾರೆ.
ಇಂದು ಶುಕ್ರವಾರ ಯುದ್ಧಪೀಡಿತ ಉಕ್ರೇನ್ ನಿಂದ ರಕ್ಷಿಸಲ್ಪಟ್ಟ 242 ಮಂದಿ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳನ್ನು ಹೊತ್ತ ವಿಶೇಷ ವಿಮಾನ ಪೋಲೆಂಡ್ ನಿಂದ ದೆಹಲಿಗೆ ಬಂದಿಳಿದಿದೆ.
ದೆಹಲಿಗೆ ಬಂದಿಳಿದ ಎಂಬಿಬಿಎಸ್ ವಿದ್ಯಾರ್ಥಿ ಹರ್ದೀಪ್ ಉಕ್ರೇನ್ ನ ಸುಮಿ ನಗರದಲ್ಲಿ ಸಿಲುಕಿ ಹಾಕಿಕೊಂಡಿದ್ದ ಅನುಭವವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು. ನಾವು ಅಲ್ಲಿಂದ ಹೊರಟ ದಿನ ನಮ್ಮ ನಗರ ಬಿಟ್ಟು ಬೇರೆ ಕಡೆ ಬಾಂಬ್ ದಾಳಿಯಾಗಿದೆ. ಭಾರತ ಸರ್ಕಾರ, ರೆಡ್ಕ್ರಾಸ್ ಮತ್ತು ಭಾರತೀಯ ರಾಯಭಾರ ಕಚೇರಿಯು ನಮಗೆ ಸಾಕಷ್ಟು ಸಹಾಯ ಮಾಡಿದೆ. ನಮ್ಮನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಹಸಿರು ಕಾರಿಡಾರ್ ಅನ್ನು ನಿರ್ಮಿಸಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಎಂದು ಹೇಳಿದರು.
ಇನ್ನು ಸುಮಿ ನಗರದಲ್ಲಿ ಸಿಲುಕಿಹಾಕಿಕೊಂಡು ನಂತರ ಸುರಕ್ಷಿತವಾಗಿ ತಾಯ್ನಾಡಿಗೆ ಬಂದಿಳಿದಿರುವ ಪ್ರೇರಣ ಎಂಬ ವಿದ್ಯಾರ್ಥಿನಿ, ನಮ್ಮದು ಕೊನೆಯ ಸ್ಥಳಾಂತರವಾಗಿತ್ತು. ಕದನ ವಿರಾಮ ಘೋಷಣೆಯಾದ ಬಳಿಕ ನಮ್ಮನ್ನು ಸ್ಥಳಾಂತರ ಮಾಡಲಾಯಿತು. ಅದಕ್ಕೂ ಮುನ್ನ ಅಲ್ಲಿ ಬಾಂಬ್ ಮತ್ತು ಶೆಲ್ಲಿಂಗ್ ದಾಳಿ ನಿರಂತರ ನಡೆಯುತ್ತಲೇ ಇತ್ತು. ನಮಗೆ ಭಾರತೀಯ ರಾಯಭಾರಿಗಳ ಮೇಲೆ ನಂಬಿಕೆಯಿತ್ತು. ಕೇಂದ್ರ ಸರ್ಕಾರ ನಮಗೆ ಸರಿಯಾದ ಸ್ಥಳಾಂತರ, ನೇರ ಬಸ್ಸು ಮತ್ತು ರೈಲುಗಳ ವ್ಯವಸ್ಥೆ ಒದಗಿಸಿತು ಎಂದು ಹೇಳಿದ್ದಾರೆ.
Welcome back home 🇮🇳!
— Anurag Thakur (@ianuragthakur) March 11, 2022
Another batch of students returned via #OperationGanga this morning and will reunite with their families & friends.
We remain committed to the safety of every Indian citizen from Ukraine. pic.twitter.com/x831RUUWAa