ಬಿಜೆಪಿಗೂ, ಕಾಂಗ್ರೆಸ್ ಗೂ ಹೋಲಿಕೆ ಮಾಡಬೇಡಿ, ಬಿಜೆಪಿ ಸ್ವರ್ಗ, ಕಾಂಗ್ರೆಸ್ ನರಕ! | ಜನತಾ ನ್ಯೂಸ್
ಬೆಂಗಳೂರು : ಬಿಜೆಪಿಗೂ, ಕಾಂಗ್ರೆಸ್ ಗೂ ಹೋಲಿಕೆ ಮಾಡಬೇಡಿ, ಬಿಜೆಪಿ ಸ್ವರ್ಗ, ಕಾಂಗ್ರೆಸ್ ನರಕ, ಮೊದಲು ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್ ಈಗ ಪ್ರಾದೇಶಿಕ ಪಕ್ಷವಾಗಿ ಕೂಡ ಉಳಿದಿಲ್ಲ, ಪ್ರತಿ ಚುನಾವಣೆಯಲ್ಲಿ ಸೋಲುತ್ತಿದ್ದಾರೆ ಎಂದರು.
ಪಂಚರಾಜ್ಯಗಳ ಚುನಾವಣೆಯಲ್ಲಿ ಸೋತರೂ, ಸಿದ್ಧರಾಮಯ್ಯಗೆ ಮಾತ್ರ ಇನ್ನೂ ಸೊಕ್ಕು ಇಳಿದಿಲ್ಲ ಎಂಬುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಒಂದು ಪಕ್ಷವಾಗಿ ಉಳಿದಿದೆಯಾ?? ಗ್ರಾಪಂ ಚುನಾವಣೆಗೆ ನಿಂತರೂ ಗೆಲ್ಲೋದು ಕಷ್ಟ, ಆ ಮಟ್ಟಿಗೆ ಬಂದಿದ್ದಾರೆ. ಅವರಿಗೂ, ನಮಗೂ ಹೋಲಿಕೆ ಮಾಡಬೇಡಿ ಎಂದು ಈಶ್ವರಪ್ಪ ಹೇಳಿದ್ದಾರೆ.
ಸಿದ್ದರಾಮಯ್ಯ ಜೊತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇದ್ದಾರೆ, ಹಿಂದುಳಿದ ವರ್ಗದವರು ಇದ್ದಾರೆ. ಆದರೆ ಯಾಕೆ ಚುನಾವಣೆಯಲ್ಲಿ ಸೋತರು? ಹಿಂದುಳಿದ ವರ್ಗದವರ ಸಮಾವೇಶ ಮಾಡಲು ಸ್ವಾತಂತ್ರ ಇಲ್ಲದಂಗೆ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸದಸ್ಯತ್ವ ಮಾಡೋದಕ್ಕೆ ಕಾರ್ಯಕರ್ತರಿಲ್ಲ. ಹೀಗಾಗೇ ಸದಸ್ಯತ್ವಕ್ಕೂ ಮೊಬೈಲ್, ಪ್ರಿಡ್ಜ್ ಕೊಡುತ್ತೇವೆ ಎಂದು ಹೇಳುತ್ತಾರೆ. ಕಾಂಗ್ರೆಸ್ ಗೆ ನಾಚಿಗೆಯಾಗಬೇಕು ಎಂದು ಕಿಡಿಕಾರಿದರು.
ಇಡೀ ಕರ್ನಾಟಕದಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಸಕ್ರಿಯರಾಗಿದ್ದಾರೆ, ಸಂಘಟನೆ ಶಕ್ತಿ ಬಿಜೆಪಿಯಲ್ಲಿ ಚೆನ್ನಾಗಿದೆ. ಹಿರಿಯರು ಸಚಿವ ಸ್ಥಾನ ಬಿಡಬೇಕು, ಅದರಲ್ಲಿ ತಪ್ಪೇನಿದೆ. ನಾವೇನು ಗೂಟ ಹೊಡೆದುಕೊಂಡು ಕೂತಿದ್ದೀವಾ. ಸಚಿವ ಸಂಪುಟದಲ್ಲಿ ಯುವಕರಿಗೆ ಅವಕಾಶ ಕೊಡಬೇಕು. ಬಿಜೆಪಿ ಜತೆ ಕಾಂಗ್ರೆಸ್ ಪಕ್ಷವನ್ನು ಹೋಲಿಕೆ ಮಾಡಬೇಡಿ ಎಂದರು.