ದಿ ಕಾಶ್ಮೀರ ಫೈಲ್ಸ್ ಚಿತ್ರ ವೀಕ್ಷಣೆ ನಿರಾಕರಿಸಿದ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಸವಾಲ್ | JANATA NEWS
ಬೆಂಗಳೂರು : ದಿ ಕಾಶ್ಮೀರ ಫೈಲ್ಸ್ ಚಿತ್ರ ವೀಕ್ಷಣೆ ನಿರಾಕರಿಸಿ ಸಿದ್ದರಾಮಯ್ಯ ಅವರ ವಿರುದ್ಧ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಕಾಶ್ಮೀರ, ಕಾಶ್ಮೀರಿ ಪಂಡಿತರ ಹಕ್ಕು ಎಂಬುದು ಯಾವಾಗ ಪ್ರತಿಪಾದಿಸುತ್ತೀರಿ? ಎಂದು ಪ್ರಶ್ನಿಸಿ ಸವಾಲ್ ಹಾಕಿದೆ.
"ಹಿಜಾಬ್ ಮುಸ್ಲಿಮರ ಮೂಲಭೂತ ಹಕ್ಕು ಎಂದು ಪ್ರತಿಪಾದಿಸುವ ಸಿದ್ದರಾಮಯ್ಯ ಅವರೇ, ಕಾಶ್ಮೀರ, ಕಾಶ್ಮೀರಿ ಪಂಡಿತರ ಹಕ್ಕು ಎಂಬುದು ಯಾವಾಗ ಪ್ರತಿಪಾದಿಸುತ್ತೀರಿ?" ಎಂದು ಪ್ರಶ್ನಿಸಿದೆ.
ಅಲ್ಲದೇ, "#TheKashmirFiles ಚಿತ್ರ ವೀಕ್ಷಣೆ ನಿರಾಕರಿಸಿರುವ ನೀವು, ಯಾರ ಪರವಾಗಿ ಫೈಲ್ ಬಿಲ್ಡ್ ಮಾಡುತ್ತಿದ್ದೀರಿ?", ಎಂದು ಖಾರವಾಗಿ ಪ್ರಶ್ನಿಸಿದೆ.
ಇಂದು ಸಂಜೆ 06:30ಕ್ಕೆ ರಾಜಧಾನಿ ಬೆಂಗಳೂರಿನ ಮಂತ್ರಿಮಾಲ್ ನಲ್ಲಿ ದಿ ಕಾಶ್ಮೀರ ಫೈಲ್ಸ್ ಚಿತ್ರ ವೀಕ್ಷಣೆಗೆ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಎಲ್ಲಾ ಶಾಸಕರಿಗೆ ಆಹ್ವಾನ ನೀಡಿದ್ದರು.