ಜೈಲಿನಿಂದ ಕೈದಿ ಪರಾರಿ, ಉಪ ಕಾರಾಗೃಹ ಮುಖ್ಯವೀಕ್ಷಕನ ವಿರುದ್ಧ ಎಫ್ಐಆರ್ | JANATA NEWS
ಬೆಳಗಾವಿ : ಬೈಲಹೊಂಗಲ ಸಬ್ಜೈಲ್ನಿಂದ ವಿಚಾರಣಾಧೀನ ಕೈದಿ ಪರಾರಿ ಪ್ರಕರಣ ಸಂಬಂಧ ಬೈಲಹೊಂಗಲ ಉಪ ಕಾರಾಗೃಹ ಸಿಬ್ಬಂದಿ ವಿರುದ್ಧ ಕೇಸ್ ದಾಖಲಾಗಿದೆ.
ಬೈಲಹೊಂಗಲ ಸಬ್ಜೈಲಿನಿಂದ ಖಾದಿರಸಾಬ್ ರಾಜೇಖಾನ್ ಎಂಬ ಕೈದಿ ಪರಾರಿಯಾಗಿದ್ದಾನೆ. ಕಳೆದ 15 ದಿನಗಳ ಹಿಂದೆ ಆರೋಪಿಯನ್ನು ಮುರಗೋಡ ಪೊಲೀಸರು ಬಂಧಿಸಿದ್ದರು. ಬಂಧಿತನ ವಿರುದ್ಧ ಕೊಲೆ ಯತ್ನ, ದೊಂಬಿ, ಜಾತಿ ನಿಂದನೆ ಸೇರಿ 6 ಪ್ರಕರಣ ದಾಖಲಿಸಲಾಗಿತ್ತು. ಆದರೆ ನಿನ್ನೆ ಆರೋಪಿ ಖಾದಿರಸಾಬ್ ಬೈಲಹೊಂಗಲ ಕಾರಾಗೃಹದಿಂದ ಮುಖ್ಯದ್ವಾರದ ಕೀ ಬಳಸಿಕೊಂಡು ಪರಾರಿಯಾಗಿದ್ದಾನೆ.
ಪ್ರಕರಣದಲ್ಲಿ ಜೈಲು ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಕೈದಿ ಪರಾರಿಯಾಗಿದ್ದಾನೆ ಎಂದು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
English summary : Prisoner escapes from jail in Belagavi