ಪಶ್ಚಿಮ ಬಂಗಾಳದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ : ರಾಷ್ಟ್ರಪತಿ ಆಳ್ವಿಕೆಗೆ ಕಾಂಗ್ರೆಸ್, ಬಿಜೆಪಿ ಒತ್ತಾಯ | JANATA NEWS
ಕೊಲ್ಕೊತ್ತಾ : ಪಶ್ಚಿಮ ಬಂಗಾಳದ, ಬಿರ್ಭೂಮ್ನ ರಾಮ್ಪುರಹತ್ನಲ್ಲಿ ಹಿಂಸಾಚಾರ ಮತ್ತು ಬೆಂಕಿ ಹಚ್ಚಿ ನಡೆಸಿದ ನರಮೇದವನ್ನು ವಿರೋಧಿಸಿ ಸಿಲಿಗುರಿಯಲ್ಲಿ ಬಿಜೆಪಿ ಕಾರ್ಯಕರ್ತರು ಇಂದು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಲ್ಲಿ ಎಂಟು ಜನರನ್ನು ಮನೆಯೊಳಗೇ ಕೂಡಿ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಲಾಗಿತ್ತು.
ಲೋಕಸಭೆ ವಿರೋಧಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರು ಈ ಘಟನೆಯನ್ನು ಬಲವಾಗಿ ಖಂಡಿಸಿದ್ದು, ಎಸ್ಐಟಿಯಿಂದ ಯಾವುದೇ ಪ್ರಯೋಜನವಾಗದು. ಬಿರ್ಹುಮ್ ಘಟನೆಯ ಕುರಿತು ನಾನು ಭಾರತದ ರಾಷ್ಟ್ರಪತಿಗಳನ್ನು ಭೇಟಿ ಮಾಡುತ್ತೇನೆ, ರಾಜ್ಯದಲ್ಲಿ 355 ನೇ ವಿಧಿಯನ್ನು ಪರಿಗಣಿಸಲು (ಹೇರಿಸಲು) ಸೂಚಿಸುತ್ತೇನೆ. ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ, ಬಂಗಾಳದಲ್ಲಿ ಜನರು ಅಸುರಕ್ಷಿತರಾಗಿದ್ದಾರೆ, ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಭೀತಿಯ ವಾತಾವರಣವಿದ್ದು, ಗ್ರಾಮಗಳು ನಿರ್ಜನವಾಗಿವೆ. ನಾಚಿಕೆಗೇಡಿನ ಸಂಗತಿ ಎಂದರೆ ಈ ಸರ್ಕಾರ ಹಲವಾರು ಅಮಾಯಕರನ್ನು ಸಾಯಿಸಿರುವುದು. ಪೊಲೀಸರು ನಿಂತಲ್ಲೇ ನಿಂತರು ಮತ್ತು ಏನೂ ಮಾಡಲಿಲ್ಲ. ಮಮತಾ ಬ್ಯಾನರ್ಜಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಮತ್ತು ಈ ಪ್ರಕರಣವನ್ನು ಸಿಬಿಐ ಅಥವಾ ಎನ್ಐಎಗೆ ಹಸ್ತಾಂತರಿಸಬೇಕು, ಎಂದು ಪ.ಬಂ. ಬಿಜೆಪಿ ಸಂಸದ ಅರ್ಜುನ್ ಸಿಂಗ್ ಹೇಳಿದ್ದಾರೆ.
ಲೋಪಿ ಸುವೆಂದು ಅಧಿಕಾರಿ ನೇತೃತ್ವದ ಬಿಜೆಪಿ ನಿಯೋಗವು ಇಂದು ಬಿರ್ಭೂಮ್ನ ರಾಮ್ಪುರಹಟ್ಗೆ ಭೇಟಿ ನೀಡಿದೆ. ಸ್ಥಳೀಯ ಟಿಎಂಸಿ ನಾಯಕನ ಹತ್ಯೆಯಾದ ಗಂಟೆಗಳ ನಂತರ ನಿನ್ನೆ ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಎಂಟು ಸುಟ್ಟ ಮೃತದೇಹಗಳು ಇಲ್ಲಿ ಪತ್ತೆಯಾಗಿವೆ.
ಅತ್ಯಂತ ದುರದೃಷ್ಟಕರ ಘಟನೆ, ಇದನ್ನು ಖಂಡಿಸಲು ಯಾವುದೇ ಪದಗಳು ಸಾಕಾಗುವುದಿಲ್ಲ. ಕಲ್ಕತ್ತಾ ಹೈಕೋರ್ಟ್ ಕೇಂದ್ರೀಯ ವಿಧಿವಿಜ್ಞಾನಕ್ಕೆ ನಿರ್ದೇಶನ ನೀಡಿದೆ. ನಾವು ಎನ್ಐಎ ಅಥವಾ ಸಿಬಿಐ ತನಿಖೆಗೆ ಒತ್ತಾಯಿಸುತ್ತೇವೆ. ಎಸ್ಐಟಿ ರಾಜ್ಯ ಸರ್ಕಾರದ ಒಂದು ವಿಭಾಗವಾಗಿದ್ದು, ಸಿಎಂ ಸರ್ಕಾರವನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಬಂಗಾಳವನ್ನು ಉಳಿಸಲು ರಾಷ್ಟ್ರಪತಿ ಆಳ್ವಿಕೆಯೊಂದೇ ದಾರಿ ಎಂದು ಸುವೆಂದು ಅಧಿಕಾರಿ ಹೇಳಿದ್ದಾರೆ.