ಕೆಎಎಸ್ ಅಧಿಕಾರಿ ಕೆ. ರಂಗನಾಥ್ ಮನೆ, ಟ್ರಸ್ಟ್, ಶಾಲೆ ಮೇಲೆ ಎಸಿಬಿ ದಾಳಿ | JANATA NEWS
ಬೆಂಗಳೂರು : ಕೆಎಎಸ್ ಅಧಿಕಾರಿ ಕೆ.ರಂಗನಾಥ್ಗೆ ಸಂಬಂಧಿಸಿದ ಮನೆ ಮತ್ತು ಟ್ರಸ್ಟ್ ಸೇರಿದಂತೆ 5 ಕಡೆ ಏಕ ಕಾಲದಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಯಲಹಂಕದಲ್ಲಿನ ಮನೆ, ದೊಡ್ಡಬಳ್ಳಾಪುರದಲ್ಲಿನ ಟ್ರಸ್ಟ್, ಕಚೇರಿ, ಶಾಲೆ ಹಾಗೂ ಸಂಬಂಧಿಕರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
42 ಜನ ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡ 5 ತಂಡಗಳಿಂದ ದಾಳಿ ಮಾಡಿದ್ದು, ಸರಕಾರಿ ಗೋಮಾಳ ಜಮೀನನ್ನು ಅಕ್ರಮವಾಗಿ ಪರಬಾರೆ ಮಾಡಿದ್ದ ಆರೋಪ ರಂಗನಾಥ್ ಅವರ ಮೇಲಿದೆ.
ಬೆಂಗಳೂರು ಉತ್ತರದಲ್ಲಿ ಕೆ. ರಂಗನಾಥ್ ಎಸಿಯಾಗಿದ್ದ ಸಂದರ್ಭದಲ್ಲಿ ಕೋಟಿ ಕೋಟಿ ವಂಚನೆ ನಡೆದಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಾಗವನ್ನೇ ಪರಭಾರೆ ಮಾಡುವಂತೆ ಕೆ. ರಂಗನಾಥ್ ಮಾಡಿದ್ದರು. 40 ಎಕರೆ ಗೋಮಾಳದ ಜಾಗವನ್ನು ಪಟ್ಟಭದ್ರ ಹಿತಾಸಕ್ತಿಯಲ್ಲಿ ಖಾಸಗಿಯವರಿಗೆ ರಂಗನಾಥ್ ನೀಡಿದ್ದರು ಎಂಬ ಆರೋಪ ಇದೆ.