ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಅಪ್ಪು-ಕಂಚಿನ ಪುತ್ಥಳಿ ಆನಾವರಣ, ಪ್ರಶಸ್ತಿ ಪ್ರಧಾನ : ಗಂಧದಗುಡಿ ಉದ್ಯಾನವನ ಉದ್ಘಾಟನೆ | JANATA NEWS
ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕೇಂದ್ರ ಕಛೇರಿಯ ಡಾ.ರಾಜಕುಮಾರ ಗಾಜಿನ ಮನೆ ಅವರಣದಲ್ಲಿರುವ ಡಾ.ರಾಜಕುಮಾರ ಪ್ರತಿಮೆ ಪಕ್ಕದಲ್ಲಿ, ಬಿಬಿಎಂಪಿ ನೌಕರರ ಕನ್ನಡ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾದ, ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ ಪ್ರತಿಮೆಯನ್ನು ಇಂದು ರವಿವಾರ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಿದರು.
ಇದೆ ಸಂದರ್ಭದಲ್ಲಿ ಗಂಧದಗುಡಿ ಉದ್ಯಾನವನ ಉದ್ಘಾಟನೆ ಮತ್ತು ಡಾ.ಪುನೀತ್ ರಾಜಕುಮಾರ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ತೋಟಗಾರಿಕೆ ಸಚಿವರಾದ ಮುನಿರತ್ನರವರು, ಶಾಸಕರಾದ ರಿಜ್ಞಾನ್ ಆರ್ಹದ್, ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನರವರು ಮತ್ತು ಡಾ.ಪುನೀತ್ ರಾಜಕುಮಾರ ರವರ ಧರ್ಮಪತ್ನಿ ಶ್ರೀಮತಿ ಆಶ್ವಿನಿರವರು ಹಾಗೂ ಅಣ್ಣ ಹಾಗೂ ನಟರಾದ ರಾಘವೇಂದ್ರ ರಾಜಕುಮಾರ್, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ಗೌರವ್ ಗುಪ್ತಾರವರು, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ವಿಶೇಷ ಆಯುಕ್ತರಾದ ಮನೋಜ್ ಜೈನ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್, ವಿಶೇಷ ಆಯುಕ್ತರಾದ ರಂಗಪ್ಪ, ಹಿಂದುಳಿದ ವರ್ಗಗಳ ಇಲಾಖೆ ಆಯುಕ್ತರಾದ ಕೆ.ಎ.ದಯಾನಂದ್, ಉಪ ಆಯುಕ್ತರಾದ ಟಿ.ಯೋಗೇಶ್, ಮಾಜಿ ಮಹಾಪೌರರು, ಕನ್ನಡ ಸಂಘದ ಗೌರವಾಧ್ಯಕ್ಷರಾದ ಜೆ.ಹುಚ್ಚಪ್ಪ, ಮಾಜಿ ಮಹಾಪೌರರಾದ ಗೌತಮ್ ಕುಮಾರ್, ಬೆಂಗಳೂರುನಗರ ಜಿಲ್ಲಾ ಬಿ.ಜೆ.ಪಿ.ಅಧ್ಯಕ್ಷರಾದ ಎನ್.ಆರ್.ರಮೇಶ್ ರವರು, ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಎ.ಅಮೃತ್ ರಾಜ್ ರವರು ದೀಪಾ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಅಪ್ಪು ಪ್ರತಿಮೆ ಲೋಕರ್ಪಣೆ ಮಾಡಿ ಮಾತನಾಡಿದ ಸಿಎಂ ಬೊಮ್ಮಾಯಿರವರು, ಪುನೀತ್ ರಾಜಕುಮಾರ್ ಹೆಸರಾಗಿ ಉಳಿದಿಲ್ಲ, ಕನ್ನಡಿಗರ ಉಸಿರಾಗಿದ್ದಾರೆ. ಪುನೀತ್ ಆಗಲಿಕೆ ನೋವು ಕನ್ನಡಿಗರ ಪ್ರತಿ ಮನೆಯಲ್ಲಿ ಕಾಡುತ್ತಿದೆ. ಕರ್ನಾಟಕದ ಎಲ್ಲ ಕಡೆಗಳಲ್ಲಿ ಪುನೀತ್ ರವರ ಭಾವಚಿತ್ರಕ್ಕೆ ಜನರು ಪೂಜೆ ಸಲ್ಲಿಸುತ್ತಿದ್ದಾರೆ. ಪುನೀತ್ ರವರ ಸಮಾಧಿ ಸ್ಥಳಕ್ಕೆ ಲಕ್ಷಾಂತರ ಜನ ಬರುತ್ತಿದ್ದಾರೆ. ಇದನ್ನ ನೋಡಿದರೆ ಪುನೀತ್ ರವರನ್ನು ನಾವು ಕಳೆದುಕೊಂಡಿಲ್ಲ. ಪುನೀತ್ ರವರು ನಗು ಮತ್ತು ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಬೆಟ್ಟದ ಹೂವು ಚಿತ್ರದ ಅಭಿನಯವನ್ನು ಹೇಗೆ ನಟಿಸಿದೆ, ಎಂದು ಕೇಳಿದಾಗ, ನನ್ನ ನಟನೆಗೆ ನಮ್ಮ ತಂದೆಯವರೇ ಸ್ಪೂರ್ತಿಯಾಗಿದ್ದಾರೆ, ಎಂದು ಪುನೀತ್ ರವರು ಹೇಳಿದರು. ಮುಗ್ದತೆ ಕಾಪಾಡಿಕೊಂಡಿರುವ ಇಬ್ಬರು ನಟರೆಂದರೆ ಡಾ.ರಾಜ್ ಹಾಗೂ ಪುನೀತ್ ರವರು. ಕರ್ನಾಟಕ ರತ್ನ ಪ್ರಶಸ್ತಿಯನ್ನು ಅತಿ ಶೀಘ್ರದಲ್ಲಿ ಡಾ.ರಾಜ್ ಕುಟುಂಬದವರ ಜೊತೆ ಚರ್ಚಿಸಿ, ಅದ್ದೂರಿಯಾಗಿ ನೇರವೆರಿಸಲಾಗುವುದು, ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯ ಮಹನೀಯರುಗಳಿಗೆ ಡಾ.ಪುನೀತ್ ರಾಜಕುಮಾರ ಪ್ರಶಸ್ತಿಯನ್ನು ಪ್ರಣಯರಾಜ ಶ್ರೀನಾಥ್, ಚಲನಚಿತ್ರ ನಟಿ ತಾರ ಆನುರಾಧ, ನಿರ್ದೇಶಕ ಎಸ್.ಕೆ.ಭಗವಾನ್, ಉಪ ಪೂಲೀಸ್ ಆಯುಕ್ತರಾದ ಪರಮೇಶ್ವರ್, ಸಾಹಿತಿ ಡಾ.ಮರುಳು ಸಿದ್ದಪ್ಪ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಪತ್ರಕರ್ತರುಗಳಾದ ಆರ್.ಪಿ.ಜಗದೀಶ್, ರಂಗನಾಥ್ ಭಾರದ್ವಜ್, ಜಯಪ್ರಕಾಶ್ ಶೆಟ್ಟಿ, ನಟರಾದ ಹೊನ್ನವಳ್ಳಿ ಕೃಷ್ಣ, ಖ್ಯಾತ ಹಿನ್ನಲೆ ಗಾಯಕಿ ರಮ್ಯ ವಸಿಷ್ಠ, ಡಾ.ರಾಜ್ ಕುಟುಂಬದ ಅಪ್ತರಾದ ಚನ್ನ, ವೈದ್ಯರಾದ ಡಾ.ರಂಗಸ್ವಾಮಿ ರವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.