ಕೋಮು ಪ್ರಚೋದನೆ ಮಾಡಿದರೆ ಶಾಸಕನೇ ಆಗಿರಲಿ, ಸಚಿವನೇ ಆಗಿರಲಿ ಅವರನ್ನೂ ಅರೆಸ್ಟ್ ಮಾಡಿ | JANATA NEWS
ಬೆಂಗಳೂರು : ಮುಸ್ಲಿಂ ವ್ಯಾಪಾರಗಳ ನಿಷೇಧಕ್ಕೆ ಒತ್ತಡ ಹೇರುವ ವಿಚಾರವಾಗಿ ವಿಧಾನ ಸೌಧದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಲ ಸಂಘಟನೆಗಳ ಕೈಗೊಂಬೆ ಆಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಟೀಕಾ ಪ್ರಹಾರ ನಡೆಸಿದರು ಮುಸ್ಲಿಂ ಸಮುದಾಯದ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಸಂದೇಶಗಳನ್ನು ಹಾಡುತ್ತಿರುವ ಕಿಡಿಗೇಡಿಗಳಿಗೆ ಮುಲಾಜಿಲ್ಲದೆ ಕಡಿವಾಣ ಹಾಕಬೇಕು, ಈ ವಿಷಯದಲ್ಲಿ ಸರಕಾರ ಸುಮ್ಮನಿರಬಾರದು ಎಂದು ಅವರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದರು.
ಈ ರೀತಿ ಪ್ರಚೋದನೆ ಮಾಡುವವರನ್ನು ಕೂಡಲೇ ಅರೆಸ್ಟ್ ಮಾಡಿ. ಶಾಸಕನೇ ಅಗಿರಲಿ, ಸಚಿವನೇ ಆಗಿರಲಿ ಯಾರನ್ನು ಸುಮ್ಮನೆ ಬಿಡುವುದು ಒಳ್ಳೆಯದಲ್ಲ. ಇವರೆಲ್ಲಾ ದೇಶ ಉಳಿಸುವವರಲ್ಲ ದೇಶ ಒಡೆಯುವವರು.
ಯುವಕರೇ ಇವರೆಲ್ಲಾ ನಿಮ್ಮ ಭವಿಷ್ಯ ರೂಪಿಸುವುದಿಲ್ಲ ಇಂತಹದ್ದಕ್ಕೆಲ್ಲ ಮುನ್ನುಗ್ಗಿ ಯುವಕರು ಬಲಿಯಾಗಬೇಡಿ. ಇವರು ದೇಶ ಉಳಿಸುವವರಲ್ಲ. ಅಮಾಯಕರು ದೇಶ ಉಳಿಸಿದರು. ಯುವಕರಿಗೆ ಹೇಳುತ್ತೇನೆ ಯಾರೂ ಇದಕ್ಕೆ ಬಲಿಯಾಗಬೇಡಿ. ಇದರಿಂದ ನಿಮ್ಮ ಭವಿಷ್ಯ ರೂಪಿಸಲು ಆಗುವುದಿಲ್ಲ ಈ ರಾಜ್ಯದಲ್ಲಿ ಸರ್ಕಾರ ಇದ್ಯಾ..? ಏನ್ ಮಾಡ್ತಿದೆ ಈ ಬಿಜೆಪಿ ಸರ್ಕಾರ ಎಂದು ಹಿಂದೂ ಮುಸ್ಲಿಂ ಸಂಘರ್ಷಕ್ಕೆ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.