ಹಿಂದೂಗಳು ಮಟನ್ ಅಂಗಡಿ ತೆರೆಯಲು ನಾನೇ ಹಣ ಕೊಡುತ್ತೇನೆ: ರೇಣುಕಾಚಾರ್ಯ | JANATA NEWS
ಬೆಂಗಳೂರು : ಹಿಂದೂಗಳು ಮಟನ್ ಅಂಗಡಿ ತೆರೆಯೋದಾದರೆ ಪ್ರೋತ್ಸಾಹ ಕೊಡುತ್ತೇನೆ ಎಂದು ಎಂಪಿ ರೇಣುಕಾಚಾರ್ಯ ಭರವಸೆ ನೀಡಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಹಿಂದೂ ಯುವಕರು ಮಟನ್ ಸ್ಟಾಲ್ ಇಡಲು ನಾನು ಖಂಡಿತ ಪ್ರೋತ್ಸಾಹ ಮಾಡುತ್ತೇನೆ. ನಾನೇ ಸ್ವಂತ ಅಂಗಡಿ ಇಟ್ಟುಕೊಳ್ಳಲು ಹಣ ಸಹಾಯ ಕೂಡ ಮಾಡುತ್ತೇನೆ. ಅವರ ವ್ಯಾಪಾರಕ್ಕೆ ಎಷ್ಟು ಹಣ ಬೇಕೊ ಅಷ್ಟು ಕೊಡುತ್ತೇನೆ ಎಂದರು.
ಹಿಜಾಬ್ ವಿಚಾರದಲ್ಲಿ ಕೋರ್ಟ್ ಗೆ ಹೋದವರು ಯಾರು? ಕೋರ್ಟ್ ತೀರ್ಪನ್ನು ವಿರೋಧ ಮಾಡುತ್ತಾರೆ ಅಂದರೆ ಇವರು ಇನ್ಯಾರಿಗೆ ಗೌರವ ಕೊಡ್ತಾರೆ? ಕುರಾನ್ ಒಂದು ಪವಿತ್ರವಾದ ಗ್ರಂಥ, ಧರ್ಮ ಸಂಘರ್ಷ ಮಾಡಿ ಎಂದು ಹೇಳಿದ್ಯಾ? ಎಂದು ಪ್ರಶ್ನಿಸಿದರು.
ಕೋವಿಡ್ ಸಮಯದಲ್ಲಿ ಹಣ್ಣುಗಳ ಮೇಲೆ ಉಗುಳಿ ವ್ಯಾಪಾರ ಮಾಡ್ತಾ ಇದ್ದರು. ಇದು ಅವರ ಧರ್ಮವಾ.? ಎಂದು ಪ್ರಶ್ನಿಸಿದ ಅವರು, ಇಂತಹ ವ್ಯಾಪಾರಿಗಳಲ್ಲಿ ನಮ್ಮವರೂ ಹುಟ್ಟಿ ಕೊಳ್ಳಬೇಕು. ಚಪ್ಪಲಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿದ್ರೂ ತಪ್ಪಿಲ್ಲ. ಹಿಂದೂ ಗಳು ಮಟನ್ ಅಂಗಡಿ ಇಡ್ತೀನಿ ಅಂತಾ ಮುಂದೆ ಬರಲಿ. ನಾನೇ ಹಣ ಸಹಾಯ ಮಾಡುತ್ತೇನೆ ಎಂದು ರೇಣುಕಾಚಾರ್ಯ ತಿಳಿಸಿದರು.