ಮುಸ್ಕಾನ್ಗೂ ಅಲ್ಖೈದಾಗೂ ಯಾವುದೇ ಸಂಬಂಧವಿಲ್ಲ, ಇದೆಲ್ಲಾ ಬಿಜೆಪಿ ಸೃಷ್ಟಿ: ಸಿಎಂ ಇಬ್ರಾಹಿಂ | JANATA NEWS
ಬೆಂಗಳೂರು : ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ಗೆ ಅಲ್ಖೈದಾ ಸಂಘಟನೆ ಬೆಂಬಲದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿ, ಅಲ್ಖೈದಾಗೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ. ಮುಸ್ಕಾನ್ ಎಂಬ ಹುಡುಗಿಗೆ ಆ ಸಂಘಟನೆಯೇ ಗೊತ್ತಿಲ್ಲ. ಇದೆಲ್ಲಾ ಇವರ(ಬಿಜೆಪಿ) ಸೃಷ್ಟಿ ಎಂದರು.
ಬೆಂಗಳೂರಿನಲ್ಲಿ ನಡೆದ ಯುವಕನ ಕೊಲೆ ವಿಚಾರದಲ್ಲಿ ಗೃಹ ಸಚಿವರ ಭಿನ್ನ ಹೇಳಿಕೆ ಬಗ್ಗೆ ಮಾತನಾಡುತ್ತಾ, ಬಿಜೆಪಿಯವರಿಗೆ ತಲೆ ಕೆಟ್ಟಿದೆ. ಮಂಗನಿಗೆ ಹೆಂಡ ಕುಡಿಸಿದರೆ ಹೇಗೆ ನೃತ್ಯ ಮಾಡುತ್ತೋ ಹಾಗೇ ಇವರು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಗೆ ಅಲ್ ಖೈದಾ ನಾಯಕ ಜವಾಹಿರಿ ಶಹಬ್ಬಾಶ್ಗಿರಿ ನೀಡಿದ್ದು, ಈ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಇಬ್ರಾಹಿಂ, ಮುಸ್ಕಾನ್ಗೂ ಅಲ್ಖೈದಾಗೂ ಯಾವುದೇ ಸಂಬಂಧವಿಲ್ಲ.
ಅಲ್ಖೈದಾ ಕರ್ನಾಟಕಕ್ಕೆ ಬಂದಿಲ್ಲ, ಬರೋಕೆ ಸಾಧ್ಯವಿಲ್ಲ. ನಮ್ಮ ಜನ ಅವ್ರನ್ನ ಬರೋದಕ್ಕೆ ಬಿಡೋದಿಲ್ಲ ಅನ್ನೋ ನಂಬಿಕೆ ನನಗಿದೆ. ಇನ್ನು ಸುಖಾಸುಮ್ಮಾನೆ ಮುಸ್ಕಾನ್ ವಿರುದ್ಧ ಆರೋಪ ಮಾಡಲಾಗ್ತಿದೆ. ಸಂಬಂಧವಿದೆ ಎಂದು ಹೇಳುವವರು ಮತ್ತು ಸರ್ಕಾರಕ್ಕೆ ತಾಕತ್ತಿದ್ರೆ, ಅವನನ್ನ ಬಂಧಿಸಿ ತನಿಖೆ ನಡೆಸಲಿ ಎಂದಿದ್ದಾರೆ.