ಕೃಷಿ ಹೊಂಡಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಅಕ್ಕ-ತಂಗಿ | JANATA NEWS
ಚಾಮರಾಜನಗರ : ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ಸಾವನ್ನಪ್ಪಿರುವ ದುರ್ಘಟನೆ ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೇಚಣ್ಣ ಎಂಬುವವರ ಮಕ್ಕಳಾದ ಪೂಜಿತಾ (14) ಹಾಗೂ ಪುಣ್ಯ (13) ಮೃತ ಸಹೋದರಿಯರು.. ಇಂದು ಬೆಳಗ್ಗೆ ತಿಂಡಿ ತಿಂದು ಬಳಿಕ ಸೀಬೆ ಹಣ್ಣು ಕೀಳಲೆಂದು ಜಮೀನಿಗೆ ತೆರಳಿದ್ದಾರೆ. ಅಲ್ಲದೆ ಸೀಬೆ ಮರ ಹತ್ತಿ ಹಣ್ಣು ಕೀಳುತ್ತಿರುವಾಗ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ.
ಹೊಂಡದಿಂದ ಮೇಲೆ ಬರಲಾಗದೆ ಬಾಲಕಿಯರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
RELATED TOPICS:
English summary :A sister-in-law who fell to a farm pit and lost her life