ಸರ್ಕಾರ ಮಸೀದಿ ಮಂದಿರ ಚರ್ಚ್ ಗಳಿಗೆ ನೋಟಿಸ್ ಕೊಟ್ಟು ಕಣ್ಣೋರೆಸುವ ಒಂದು ನಾಟಕ ಮಾಡಿದೆ | JANATA NEWS
ಬೆಳಗಾವಿ : ಮುಸ್ಲಿಂರ ಆಜಾನ್ ಕೂಗಲು ಮೈಕ್ ಬಳಸುತ್ತಿರುವುದನ್ನು ವಿರೋಧಿಸಿ ಮೇ9 ರಿಂದ ಹಿಂದೂ ದೇವಾಲಯಗಳಲ್ಲಿ ಹನುಮಾನ ಚಾಲಿಸ್, ಸುಪ್ರಭಾತವನ್ನು ಬೆಳಗ್ಗೆ 5 ಗಂಟೆಯಿಂದ ಮೈಕ್ನಲ್ಲಿ ಪಠಿಸುವ ಆಂದೋಲನ ಪ್ರಾರಂಭಿಸಲಾಗುತ್ತಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.
ಮಸೀದಿಗಳಲ್ಲಿ ಆಜಾನ್ ನಿಲ್ಲಿಸಲು ನೀಡಿದ ಗಡುವು ಅಂತ್ಯ ಹಿನ್ನೆಲೆಯಲ್ಲಿ ಮೇ 9ರಿಂದ ಶ್ರೀರಾಮ ಸೇನೆಯಿಂದ ಬೃಹತ್ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ ಎಂದು ಬೆಳಗಾವಿ ನಗರದಲ್ಲಿ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
1 ಸಾವಿರಕ್ಕೂ ಅಧಿಕ ದೇವಸ್ಥಾನಗಳಲ್ಲಿ ಓಂಕಾರ ನಾಮಸ್ಮರಣೆ ಮಾಡಲಾಗುವುದು. ಬೆಳಗ್ಗೆ 5 ಗಂಟೆಗೆ ಪೂಜೆ ಸಲ್ಲಿಸಿ ಸುಪ್ರಭಾತ ಭಜನೆ ಮಾಡುತ್ತೇವೆ ಎಂದಿದ್ದಾರೆ.
ನಮ್ಮದ್ದು ಮುಸ್ಲಿಂರ ಆಜಾನ್ ವಿರುದ್ಧ ಹೋರಾಟ ಅಲ್ಲ. ಮೈಕ್ನ ಕಿರಿಕಿರಿಯಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಸರಕಾರಕ್ಕೆ ವಿನಂತಿ ಮಾಡುತ್ತೇವೆ. ಯುಪಿ ಮಾದರಿಯಲ್ಲಿ 60 ಸಾವಿರ ಮೈಕ್ ಸೀಜ್ ಮಾಡಿದ ಹಾಗೆ ಕರ್ನಾಟಕದಲ್ಲಿಯೂ ಮಾಡಬೇಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಧೈರ್ಯ ಮಾಡಿ ಎಂದು ಸಲಹೆ ನೀಡಿದರು.
ನೀವು ಬುರ್ಖಾ ಹಾಕಿಕೊಂಡು ಹೋದ್ರೂ ಮುಸ್ಲಿಮರು ನಿಮಗೆ ವೋಟ್ ಹಾಕಲ್ಲಾ. ಯೋಗಿ ಆದಿತ್ಯನಾಥ್ ಅರವತ್ತು ಸಾವಿರಕ್ಕೂ ಅಧಿಕ ಮೈಕ್ ಗಳನ್ನ ಸೀಜ್ ಮಾಡಿದರು. ಆ ಧೈರ್ಯ ನಿಮಗೆ ಯಾಕೆ ಬರ್ತಿಲ್ಲ, ನು ದಾಡಿಯಾಗಿದೆ ನಿಮಗೆ. ಯಾಕೆ ಹೆದರುತ್ತಿದ್ದೀರಿ ನೀವು, ಸುಪ್ರೀಂ ಕೋರ್ಟ್ ಆರ್ಡರ್ ಇದೆ ಪಾಲಿಸಬೇಕಷ್ಟೇ. ನಿಮ್ಮ ಹೆದರಿಕೆ ಪರಿಣಾಮದಿಂದ ಮುಸ್ಲಿಮರ ಸೊಕ್ಕಿನಿಂದ ವರ್ತನೆ ಮಾಡ್ತಿದ್ದಾರೆ. ಸರ್ಕಾರ ಮತ್ತು ಮುಸ್ಲಿಂರು ಇಬ್ಬರ ವಿರುದ್ಧವೂ ನಮ್ಮ ಹೋರಾಟವಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.