ಪ್ರಮೋದ್ ಮುತಾಲಿಕ್ರನ್ನ ಒದ್ದು ಒಳಗೆ ಹಾಕಿ: ಹೆಚ್.ಡಿ ಕುಮಾರಸ್ವಾಮಿ | JANATA NEWS
ಬಾಗಲಕೋಟೆ : ಪ್ರಮೋದ್ ಮುತಾಲಿಕ್ ಅಂತವರನ್ನ ಮೊದಲು ಒದ್ದು ಒಳಗೆ ಹಾಕಬೇಕು. ಇಂತವರನ್ನ ಒದ್ದು ಒಳಗೆ ಹಾಕದೇ ಇದ್ದಲ್ಲಿ, ಸಮಾಜದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಉಳಿಸಲಿಕ್ಕೆ ಕಷ್ಟ ಆಗುತ್ತದೆ ಎಂದು ಕಿಡಿಕಾರಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಇವತ್ತಿನಿಂದ ಏನ್ ಶುರು ಮಾಡಿದ್ದಾರಲ್ಲಾ ಹನುಮಾನ್ ಚಾಲಿಸ್ ಬಗ್ಗೆ ಸುಪ್ರೀಂ ಕೋರ್ಟ್ ಏನ್ ಎಷ್ಟು ಸೌಂಡ್ ಇಟ್ಟುಕೊಂಡು ಮಾಡಬೇಕು ಅಂತ ಹೇಳಿದೆಯೋ ಅಷ್ಟು ಇಟ್ಟುಕೊಂಡು ಮಾಡಿಕೊಳ್ಳಲಿ. ಅದಕ್ಕೆ ಸರ್ಕಾರವೂ ಆದೇಶ ನೀಡಲಿ. ಆರೋಗ್ಯ ಸಮಸ್ಯೆ ಆದ್ದರೆ ಸಮಸ್ಯೆ ಉದ್ಭವ ಆದಾಗ ಮನೆಯಲ್ಲಿ ಹೇಳಿಕೊಳ್ಳುತ್ತೇವೆ. ಅದೇನು ದೊಡ್ಡ ಸಾಧನೆ ಅಲ್ಲ ಎಂದರು.
ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕದಡೋದಕ್ಕೆ ಬಿಡಬಾರದು. ರಾಜ್ಯದಲ್ಲಿ ಸರ್ವ ಜನಾಂಗದ ಶಾಂತಿಯ ತೋಟವನ್ನು ಕಾಪಾಡುವ ಕೆಲಸ ಮಾಡಬೇಕು. ಇದೇನ್ ಕೋಮು ಸೌವಾರ್ಹತೆ ಕದಡೋರು ಇದ್ದಾರಲ್ಲ.. ಅವರನ್ನು ಒದ್ದು ಒಳಗೆ ಹಾಕಬೇಕು ಎಂದು, ಪ್ರಮೋದ್ ಮುತಾಲಿಕ್ ವಿರುದ್ಧ ವಾಗ್ಧಾಳಿ ನಡೆಸಿದರು.