ಮುಂಬೈನ 29 ಕಡೆ ದಾಳಿ ಮಾಡಿ 6 ದಾವೂದ್ ಇಬ್ರಾಹಿಂ ಸಹಚರರ ಬಂಧಿಸಿದ ಎನ್ಐಎ : ಮುಂದುವರೆದಿದೆ ದಾಳಿ | JANATA NEWS
ಬೆಂಗಳೂರು : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರರ ಮೇಲೆ ಎನ್ಐಎ ದಾಳಿ ನಡೆಸಿದ್ದು, ಮುಂಬೈನ ವಿವಿಧ ಪ್ರದೇಶಗಳಿಂದ ಆರು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಾಗಿರುವ ಆರು ಮಂದಿಯನ್ನು ಇಂದು ಏಜೆನ್ಸಿ ವಿಚಾರಣೆ ನಡೆಸುತ್ತಿದ್ದು, 20 ಸ್ಥಳಗಳಲ್ಲಿ ದಾಳಿ ಮುಂದುವರೆದಿದೆ.
ಮುಂಬೈನಲ್ಲಿರುವ ಸಲೀಂ ಫ್ರೂಟ್ ಎಂಬಾತನ ನಿವಾಸದ ಮೇಲೆ ಎನ್ಐಎ ದಾಳಿ ನಡೆಸಿದ ನಂತರ ಆತನನ್ನು ಬಂಧಿಸಿದೆ. ಆತ ದಾವೂದ್ ಇಬ್ರಾಹಿಂನ ಸಹಚರನಾಗಿದ್ದು, ಕೆಲವು ಮಹತ್ವದ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಮುಂಬೈನ ಮಾಹಿಮ್ ಪ್ರದೇಶದಲ್ಲಿ ಕಯ್ಯುಮ್ ಎಂಬ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಬಂಧಿಸಿದೆ. ಸುಹೇಲ್ ಖಂಡ್ವಾನಿ, ಮ್ಯಾನೇಜಿಂಗ್ ಟ್ರಸ್ಟಿ ಮಹಿಮ್ ದರ್ಗಾ ಮತ್ತು ಹಾಜಿ ಅಲಿ ದರ್ಗಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ತೆಗೆದುಕೊಂಡಿದೆ.
ಭೂಗತಪಾತಕಿ ದಾವೂದ್ ಇಬ್ರಾಹಿಂನ ಸಹಚರರು ಮತ್ತು ಕೆಲವು ಹವಾಲಾ ಆಪರೇಟರ್ಗಳಿಗೆ ಸಂಬಂಧಿಸಿದಂತೆ ಮುಂಬೈನ ಹಲವಾರು ಸ್ಥಳಗಳಲ್ಲಿ ಎನ್ಐಎ ದಾಳಿ ನಡೆಸುತ್ತಿದೆ. ಮುಂಬೈನ ಬಾಂದ್ರಾ, ಕುರ್ಲಾ ಮತ್ತು ಮಾಹಿಮ್ ಪ್ರದೇಶಗಳಲ್ಲೂ ಎನ್ಐಎ ದಾಳಿ ನಡೆಯುತ್ತಿದೆ.
ಇಂದು ನಗರದಾದ್ಯಂತ ಅನೇಕ ಸ್ಥಳಗಳಲ್ಲಿ ದಾಳಿ ನಡೆಸುತ್ತಿರುವ ಎನ್ಐಎ ಬಾಂದ್ರಾದ ಡಿಲೈಟ್ ಅಪಾರ್ಟ್ಮೆಂಟ್ನಿಂದ ಒಬ್ಬ ಸಮೀರ್ ಅಂಗೋರಾನನ್ನು ಬಂಧಿಸಿದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ ಗುಡ್ಡು ಪಠಾಣ್ನನ್ನು ಎನ್ಐಎ ವಶಕ್ಕೆ ತೆಗೆದುಕೊಂಡಿದ್ದು, ಇಂದು ಮುಂಬೈನ ಹಲವು ಸ್ಥಳಗಳಲ್ಲಿ ಎನ್ಐಎ ದಾಳಿ ನಡೆಸುತ್ತಿದೆ.
ದಾವೂದ್ ಇಬ್ರಾಹಿಂ ಕಸ್ಕರ್ ಮತ್ತು ಆತನ ಸಹಚರರನ್ನು ಒಳಗೊಂಡಿರುವ ಡಿ-ಕಂಪನಿಯ ಅಂತಾರಾಷ್ಟ್ರೀಯ ಭಯೋತ್ಪಾದನಾ ಜಾಲದ ಭಯೋತ್ಪಾದನೆ/ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ 29 ಸ್ಥಳಗಳಲ್ಲಿ ಎನ್ಐಎ ಇಂದು ದಾಳಿ ನಡೆಸಿದೆ.
ದಾವೂದ್ ಇಬ್ರಾಹಿಂನ ಶಂಕಿತ ಸಹಚರರ ಜಾಗಗಳಲ್ಲಿ ಇಂದು ನಡೆಸಿದ ಶೋಧದ ವೇಳೆ, ಎಲೆಕ್ಟ್ರಾನಿಕ್ ಉಪಕರಣಗಳು, ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿದ ದಾಖಲೆಗಳು, ನಗದು ಮತ್ತು ತೂಪಕಿಗಳು ಸೇರಿದಂತೆ ವಿವಿಧ ದೋಷಾರೋಪಣೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.