ತಲೆ ಮೇಲೆ ಕಲ್ಲು ಎತ್ತಿ ಹಾಕಿ ಉಪನ್ಯಾಸಕನ ಬರ್ಬರ ಹತ್ಯೆ | JANATA NEWS
ರಾಯಚೂರು : ಉಪನ್ಯಾಸಕರೊಬ್ಬರನ್ನು ನಡು ರಸ್ತೆಯಲ್ಲಿಯೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ದೇವದುರ್ಗ-ಶಹಾಪೂರ ಮೇನ್ ರೋಡ್ ನಲ್ಲಿ ನಡೆದಿದೆ.
ಎಕ್ಸಾಂ ಡ್ಯೂಟಿ ಮುಗಿಸಿಕೊಂಡು ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಉಪನ್ಯಾಸಕನ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ದೇವದುರ್ಗ ಬಳಿ ನಡೆದಿದೆ.
ಮಾನಪ್ಪ ಗೋಪಳಾಪುರ(59) ಕೊಲೆಯಾದ ವ್ಯಕ್ತಿ ರ್ದುದೈವಿ. ಮಾನಪ್ಪ ಅವರು ದೇವದುರ್ಗದ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ನಿರ್ವಯಿಸುತ್ತಿದ್ದರು.
ಯಾದಗಿರಿಯ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
English summary :Lecturer murder in Rayachuru