ಯುವತಿ ಹಣೆಗೆ ಗನ್ಯಿಟ್ಟುಅತ್ಯಾಚಾರ, ಆರೋಪಿ ಬಂಧನ | JANATA NEWS
ಬೆಂಗಳೂರು : ಬಾಡಿಗೆ ಮನೆಯಲ್ಲಿದ್ದ ಯುವತಿಯ ಹಣೆಗೆ ರಿವಾಲ್ವರ್ ಇಟ್ಟು ಅತ್ಯಾಚಾರ ಎಸಗಿದ ಮನೆ ಮಾಲೀಕ ನನ್ನ ಅಶೋಕ್ ನಗರ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಶಾಂತಿನಗರ ನಿವಾಸಿ ಅನಿಲ್ ರವಿಶಂಕರ್ ಪ್ರಸಾದ್ ಬಂಧಿತ ಆರೋಪಿಯಾಗಿದ್ದಾನೆ. ರವಿಶಂಕರ್ ಟೈಲ್ಸ್ ವ್ಯಾಪಾರ ಮಾಡಿಕೊಂಡಿದ್ದು, ಇವನಿಗೆ ಸೇರಿದ ಮನೆಯಲ್ಲಿ ಪಶ್ಚಿಮ ಬಂಗಾಳದ ಮೂಲದ ಯುವತಿ ಕಳೆದ ಮಾರ್ಚ್ನಿಂದ ಬಾಡಿಗೆಗಿದ್ದಳು.
ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಳು. ಈ ಮಧ್ಯೆ ಮನೆಗೆ ಸ್ನೇಹಿತರು ಬರುತ್ತಿರುವ ಬಗ್ಗೆ ಮನೆ ಮಾಲೀಕ ಹಾಗು ಯುವತಿ ನಡುವೆ ಮಾತಿನ ಸಂಘರ್ಷ ನಡೆದಿತ್ತು.
ಕಳೆದ ಏಪ್ರಿಲ್ 11 ರಂದು ಆಕೆಯ ಮನೆಗೆ ಹೋದ ಮಾಲೀಕ ಮಾತನಾಡುವ ನೆಪದಲ್ಲಿ ತನ್ನ ಬಳಿಯಿದ್ದ ಲೈಸೆನ್ಸ್ ರಿವಾಲ್ವರ್ ತಲೆಗೆ ಇಟ್ಟು ತನ್ನೊಂದಿಗೆ ಸಹಕರಿಸುವಂತೆ ಒತ್ತಡ ಹೇರಿದ್ದ ಎನ್ನಲಾಗಿದೆ.
ಯುವತಿ ಪೋಷಕರೊಂದಿಗೆ ಕೃತ್ಯದ ವಿಚಾರ ಹೇಳಿದಾಗ, ಪೋಷಕರು ಆಕೆಯನ್ನು ಸಮಾಧಾನ ಮಾಡಿ ಅಶೋಕ್ ನಗರ ಪೊಲೀಸ್ ಠಾಣೆಗೆ ಕರೆತಂದು ದೂರನ್ನು ನೀಡಿದ್ದರು.
ಸಂತ್ರಸ್ತ ಯುವತಿ ಕೊಟ್ಟ ದೂರಿನ ಅನ್ವಯ ಆರೋಪಿ ರವಿಶಂಕರ್ ಪ್ರಸಾದ್ನನ್ನು ಅಶೋಕ್ ನಗರ ಪೊಲೀಸರು ಬಂಧಿಸಿದ್ದಾರೆ.