ಮಡಿವಾಳ ಸಮಾಜಕ್ಕೆ ಕುರಿತಾದ ಮಾತಿಗೆ ವಿಷಾದ ವ್ಯಕ್ತ ಪಡಿಸಿದ ಸಿದ್ದರಾಮಯ್ಯ : ವಿವಾದ ಬೆಳಸದೆ ಸೌಹಾರ್ದತೆ ಕಾಪಾಡಲು ಮನವಿ | JANATA NEWS
ಬೆಂಗಳೂರು : ತಮ್ಮ ಮಾತುಗಳಿಂದ ಮಡಿವಾಳ ಸಮಾಜದ ಬಂಧುಗಳ ಮನಸ್ಸಿಗೆ ನೋವಾಗಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಷಾದ ವ್ಯಕ್ತಪದಿಸಿದ್ದಾರೆ. ಹಾಗೂ ಮಡಿವಾಳ ಸಮಾಜದ ಬಂಧುಗಳು ವಿವಾದವನ್ನು ಬೆಳೆಸಲು ಹೋಗದೆ ಸೌಹಾರ್ದತೆಯನ್ನು ಕಾಪಾಡಿಕೊಂಡು ಬರಬೇಕೆಂದು ಮನವಿ ಮಾಡುತ್ತಿದ್ದೇನೆ, ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಫೇಸ್ಬುಕ್ ದಲ್ಲಿ ಬರೆದಿರುವ ಅವರು, "ಚನ್ನರಾಯಪಟ್ಟಣದ ಸಭೆಯೊಂದರಲ್ಲಿ ಮಾಡಿದ ಭಾಷಣದಲ್ಲಿ ಬಳಸಿದ ಗಾದೆ ಮಾತುಗಳಿಂದ ಮಡಿವಾಳ ಸಮಾಜದ ನನ್ನ ಬಂಧುಗಳ ಮನಸ್ಸಿಗೆ ನೋವಾಗಿದೆ ಎಂದು ಗೊತ್ತಾಯಿತು. ಇದಕ್ಕಾಗಿ ವಿಷಾದಿಸುತ್ತೇನೆ.
ನಾನು ಯಾವುದೇ ಸಮುದಾಯ ಇಲ್ಲವೇ ವೃತ್ತಿಯನ್ನು ಅಗೌರವಿಸುವ ಉದ್ದೇಶದಿಂದ ಆಡಿದ ಮಾತಲ್ಲ.
ದುಡಿದು ತಿನ್ನುವ ಎಲ್ಲ ವೃತ್ತಿಗಳ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಮಡಿವಾಳ ಸಮಾಜವೂ ಸೇರಿದಂತೆ ಎಲ್ಲ ಹಿಂದುಳಿದ ಜಾತಿಗಳ ಸರ್ವಾಂಗೀಣ ಅಭಿವೃದ್ದಿಗೆ ನಾನು ಮಾಡಿದ ಕೆಲಸ ರಾಜ್ಯದ ಜನರಿಗೆ ಗೊತ್ತಿದೆ.
ಈ ಹಿನ್ನೆಲೆಯಲ್ಲಿ ಮಡಿವಾಳ ಸಮಾಜದ ಬಂಧುಗಳು ವಿವಾದವನ್ನು ಬೆಳೆಸಲು ಹೋಗದೆ ಸೌಹಾರ್ದತೆಯನ್ನು ಕಾಪಾಡಿಕೊಂಡು ಬರಬೇಕೆಂದು ಮನವಿ ಮಾಡುತ್ತಿದ್ದೇನೆ.", ಎಂದು ಮನವಿಮಾಡಿದ್ದಾರೆ.