ದಯವಿಟ್ಟು ರಾಜ್ಯದ ಜನತೆ ಚಡ್ಡಿ ಬಿಚ್ಚಬೇಡಿ: ಹೆಚ್. ಡಿ.ಕುಮಾರಸ್ವಾಮಿ | JANATA NEWS
ಬೆಂಗಳೂರು : ಚಡ್ಡಿ ಸುಡುತ್ತೇವೆ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯಿಸಿ, ಆರ್ ಎಸ್ ಎಸ್ , ಚಡ್ಡಿ ಬಿಚ್ಚುವ ಬಗ್ಗೆ ಮಾತನಾಡುತ್ತಿದ್ದಾರೆ, ಯಾರ ಚಡ್ಡಿ ಬಿಟ್ಟಿ ಇವರಿಗೇನು ಲಾಭವಿದೆ, ಕಾಂಗ್ರೆಸ್ ನವರು ಚಡ್ಡಿ ಸುಟ್ರೆ ಆರಗ ಜ್ಞಾನೇಂದ್ರ ಕಾಂಗ್ರೆಸ್ ಚಡ್ಡಿ ಉದುರಿಸ್ತೀವಿ ಅಂತಾರೆ, ನಿಮ್ಮ ನಿಮ್ಮ ಚಡ್ಡಿ ಉದುರಿಸಿಕೊಳ್ಳಿ ಬೇಕಿದ್ದರೆ, ರಾಜ್ಯದ ಜನತೆಯ ಚಡ್ಡಿ ಉದುರಿಸಲು ಹೋಗಬೇಡಿ, ರಾಜ್ಯದ ಜನತೆ ಗೌರವಯುತವಾಗಿ ಬದುಕುವ ವಾತಾವರಣ ನಿರ್ಮಾಣ ಮಾಡಿ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಸಮ್ಮಿಶ್ರ ಸರ್ಕಾರ ಬೀಳಿಸಿ ಅಭಿವೃದ್ಧಿ ಮಾಡುತ್ತೇವೆ ಅಂತಾ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 2018ರ ಚುನಾವಣೆ ಅತಂತ್ರ ಪರಿಸ್ಥಿತಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಯಿತು. ಆ ಸರ್ಕಾರ ತೆಗೆಯಲೇಬೇಕು ಅಂತಾ ಹಲವಾರು ತಿಂಗಳುಗಳ ಕಾಲ ಪ್ರೋಸೆಸ್ ನಡೆಯಿತು.
ಹಣಕಾಸಿನ ಆಮಿಷದ ಬಗ್ಗೆ ಜನರ ಮುಂದೆ ಅಂದು ಇಟ್ಟಿದ್ದೇವು. ಇದಾದ ನಂತರ ಸಮ್ಮಿಶ್ರ ಸರ್ಕಾರ ತೆಗೆಯಲು ಕಸರತ್ತು ನಡೆಯಿತು. ಕುತಂತ್ರ ಮೂಲಕ ಸಮ್ಮಿಶ್ರ ಸರ್ಕಾರ ಕಿತ್ತೊಗೆದರು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಶಿಕ್ಷಣ ಸಚಿವರು ನಾವೆಲ್ಲಾ ಮೂಲತಃ ಆರ್ಎಸ್ಎಸ್ ನವರು ಅಂತಾ ಹೇಳಿದ್ದಾರೆ. ಆರ್ಎಸ್ಎಸ್ ರಾಷ್ಟ್ರ ಭಕ್ತಿ, ಹಿಂದುತ್ವ ಹೆಸರಿನ ಹೈಜಾಕ್ ಪಡೆದು ಹೊರಟ್ಟಿದ್ದಾರೆ ಎಂದರು.
ಹೊಸ ಬದಲಾವಣೆ ತರಲು ಹಲವಾರು ಕುತಂತ್ರದ ಮೂಲಕ ಮೈತ್ರಿ ಸರ್ಕಾರ ಯಾರ್ಯಾರು ಸೇರಿ ತೆಗೆದರೋ ನನಗೆ ಆ ಸರ್ಕಾರ ಹೋಗಲಿ ಅಂತಾ ಆಗ ನಾನೇ ತೀರ್ಮಾನಕ್ಕೆ ಬಂದಿದ್ದೆ. ಅದರಿಂದಲೇ ನಾನು ಆಗ ಅಮೇರಿಕಾಕ್ಕೆ ಹೋಗಿದ್ದು. ನನಗೆ ಕೊಡುತ್ತಿದ್ದ ಹಿಂಸೆಗಳನ್ನು ನೋಡಿದ್ದೆ. ರೈತರ ಸಾಲಾ ಮನ್ನಾ ಮಾಡುವ ಟಾಸ್ಕ್ ನನ್ನ ಮೇಲಿತ್ತು, ಜನತೆಗೆ ಮಾತುಕೊಟ್ಟಿದೆ.
ಆ ಕಾರ್ಯಕ್ರಮ ಪೂರೈಸಿದ ನಂತರ ನನಗೆ ಅದರಲ್ಲಿ ಆಸಕ್ತಿ ಉಳಿದಿರಲಿಲ್ಲ. ಕಾರಣ ಅವತ್ತು ಇದ್ದಂತ ಆ ಮೈತ್ರಿ ಸರ್ಕಾರದ ನಡುವಳಿಕೆಗಳು ಮನಸ್ಸಿನಲ್ಲಿ ಬೇಸರ ಇತ್ತು ಅದರಿಂದ ನಾನು ನಿರಾಸಕ್ತನಾಗಿದ್ದೆ. ಹೋದರೆ ಹೋಗಲಿ ಯಾಕೆ ಪ್ರತಿನಿತ್ಯ ಇಂತಹ ಒಂದು ಘಟನೆಗಳು ನಡೆಯಬೇಕು.
ನಾನು ಯಾಕೆ ಇಷ್ಟೊಂದು ವ್ಯರ್ಥ ಕಸರತ್ತು ಮಾಡಬೇಕು ರಾಜ್ಯಕ್ಕೆ ಒಳ್ಳೆಯದು ಮಾಡೋದಾದ್ರೇ ಮಾಡಿಕೊಳ್ಳಲಿ ಅಂತಾ ನಾನು ನಿರ್ಧಾರಕ್ಕೆ ಬಂದು ಬಿಟ್ಟು ಬಿಟ್ಟೆ ಮತ್ತೆ ಪ್ರಯತ್ನ ಮಾಡಲು ನಾನು ಹೋಗಲಿಲ್ಲ. ಅದ್ರಲ್ಲಿ ಯಾರ ಯಾರ ಪಾತ್ರ ಎನೂ ಅದೆಲ್ಲಾ ಈಗ ಬೇಕಿಲ್ಲ ಎಂದರು.