ಮಂಡ್ಯದಲ್ಲಿ RSS ಕಾರ್ಯಕರ್ತರಿಂದ ಮನೆ ಮನೆಗೆ ತೆರಳಿ ಚಡ್ಡಿ ಸಂಗ್ರಹಿಸಿ ಪಾರ್ಸೆಲ್ | JANATA NEWS
ಮಂಡ್ಯ : ಮಂಡ್ಯದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ, ಚಡ್ಡಿ ಸಂಗ್ರಹಿಸಿ ಪ್ಯಾಕ್ ಮಾಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಾರ್ಸಲ್ ಮಾಡಿದ್ದಾರೆ.
ಈ ವೇಳೆ ಮಾತನಾಡಿದಂತ ಆರ್ ಎಸ್ ಎಸ್ ಕಾರ್ಯಕರ್ತರೊಬ್ಬರು, ಸಿದ್ಧರಾಮಯ್ಯನವರೇ, ಆರ್ ಎಸ್ ಎಸ್ ಏನು.? ಎತ್ತಾ ಎನ್ನುವುದೇ ಗೊತ್ತಿಲ್ಲ. ನೀವು ಒಂದು ಚಡ್ಡಿ ಸುಡೋದಕ್ಕೆ ಹೋದ್ರೆ ನಾವು ಲಕ್ಷಾಂತರ ಚಡ್ಡಿಯನ್ನು ಪಾರ್ಸಲ್ ಮಾಡುತ್ತೇವೆ ಎಂದರು.
ಚೆಡ್ಡಿಗಳನ್ನು ಸುಟ್ಟು ಹಾಕುತ್ತೇವೆ ಎಂದಿರುವ ನಿಮಗೆ ಅವುಗಳನ್ನು ಹುಡುಕುವುದು ಕಷ್ಟವಾಗದಿರಲಿ ಅಂತ ಪಾರ್ಸೆಲ್ ಕಳಿಸುತ್ತಿದ್ದೇವೆ. ಹಳ್ಳಿಹಳ್ಳಿಗಳಿಗೂ ಚೆಡ್ಡಿಗಳನ್ನು ಕಳಿಸುತ್ತೇವೆ. ಆರೆಸ್ಸೆಸ್ ಮೂಲದ ಬಗ್ಗೆ ನೀವು ಅವಹೇಳನಕಾರಿಯಾಗಿ ಮಾತಾಡುತ್ತಿರುವಿರಿ. ಅಸಲಿಗೆ, ನಿಮಗೆ ಸಂಘದ ಬಗ್ಗೆ ಏನೂ ಗೊತ್ತಿಲ್ಲ. ಹಾಗಾಗಿ ಅದರ ಮೂಲದ ಬಗ್ಗೆ ಮಾತಾಡುವಾಗ ಹಗುರವಾಗಿ ಮಾತಾಡಬೇಡಿ ಎಂದು ಒಬ್ಬರು ಹೇಳಿದ್ದಾರೆ.
ನೀವು ನಿನ್ನೆ, ಮೊನ್ನೆ ಬಗ್ಗೆ ಆರ್ ಎಸ್ ಎಸ್ ಬಗ್ಗೆ ಮಾತನಾಡುತ್ತಿದ್ದೀರಿ. ದೇಶಾದ್ಯಂತ ಆರ್ ಎಸ್ ಎಸ್ ಸಂಘಟನೆಯಿದೆ. ಸಂಘಟನೆಯ ಬಗ್ಗೆ ಮಾತನಾಡೋ ಮೊದಲು ಎಚ್ಚರಿಕೆ ಇರಲಿ. ದಯವಿಟ್ಟು ನೀವು ಗೌರವಯುತವಾಗಿ ಮಾತನಾಡಿ.
ಬೆಂಗಳೂರಿನ ರಾಮೋಹಳ್ಳಿ ಬಳಿ ಸಂಘದ ವತಿಯಿಂದ 20 ದಿನಗಳ ಒಟಿಸಿ ಕ್ಯಾಂಪ್ ಏರ್ಪಡಿಸಲಾಗಿದೆ. ಅವರು ಈ ಕ್ಯಾಂಪ್ ನಲ್ಲಿ ಭಾಗವಹಿಸಲಿ ಎಂದು ಹೇಳಿದ ಅವರು ಚೆಡ್ಡಿಗಳ ಬಗ್ಗೆ ಸಿದ್ದರಾಮಯ್ಯ ಯೋಚಿಸುವುದು ಬೇಡ, ಅವರಿಗೆ ಸಾಕಾಗುವಷ್ಟು ಕಳಿಸ್ತೀವಿ ಎಂದು ಕಾರ್ಯಕರ್ತರು ಹೇಳಿದ್ದಾರೆ.