ನಡು ರಸ್ತೆಯಲ್ಲಿ ವಾಹನಗಳನ್ನು ಅಡ್ಡ ಗಟ್ಟಿ ಕಾರನ್ನು ಜಖಂ ಗೊಳಿಸಿದ ಆನೆಗಳು | JANATA NEWS
ಚಾಮರಾಜನಗರ : ಗಡಿ ಭಾಗವಾದ ಆಸನೂರು ಬಳಿ ರಸ್ತೆ ಮೇಲೆ ವಾಹನಗಳನ್ನು ಅಡ್ಡಗಟ್ಟಿದ ಕಾಡಾನೆಗಳು ಮೇಲೆ ದಾಳಿ ಮಾಡಲು ಮುಂದಾಗಿವೆ.
ತಮಿಳುನಾಡು ಡಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಮರಾಜನಗರ ಗಡಿ ಭಾಗವಾದ ಆಸನೂರು ಬಳಿ ಮರಿಯಾನೆ ಜೊತೆ ಹೆದ್ದಾರಿಗೆ ಬಂದ ಆನೆಗಳು ವಾಹನಗಳ ಮೇಲೆ ದಾಳಿ ನಡೆಸಿವೆ.
ಒಂದು ಮರಿಯಾನೆಯೊಂದಿಗೆ ಎರಡು ದೊಡ್ಡ ಕಾಡಾನೆಗಳು ಹೆದ್ದಾರಿಯನ್ನು ದಾಟಲು ಮುಂದಾದವು. ಈ ವೇಳೆ ವಾಹನಗಳ ಸದ್ದಿಗೆ ಬೆದರಿದವು. ಆನೆಗಳು ವಾಹನಗಳ ಮೇಲೆ ದಾಳಿಗೆ ಮುಂದಾದವು. ಒಂದು ಜೀಪ್ ಕೂದಲೆಳೆ ಅಂತರದಲ್ಲಿ ದಾಳಿಯಿಂದ ತಪ್ಪಿಸಿಕೊಂಡರೆ, ಕಾರೊಂದು ಮಧ್ಯದಲ್ಲಿ ಸಿಲುಕಿಕೊಂಡಿತು.
ಆನೆಗಳು ಬರುತ್ತಿದ್ದರೂ ಭಯವಿಲ್ಲದೆ ಕಾರು ಚಾಲಕ ಮುಂದಕ್ಕೆ ಸಾಗುತ್ತಿದ್ದಾಗ ಆನೆ ಅಡ್ಡಗಟ್ಟಿದೆ. ಇದರ ಮೇಲೆ ರೋಷದಿಂದಲೇ ಎರಡು ಆನೆಗಳು ದಾಳಿಗೆ ಮುಂದಾದವು. ಅಲ್ಲದೇ ಕಾರಿನ ಸೈಡ್ ಮಿರರ್ ಒಂದನ್ನು ಕಿತ್ತೆಸೆದವು. ತಕ್ಷಣವೇ ಕಾರಿನಲ್ಲಿದ್ದ ಯುವಕ ಕಾರನ್ನು ಬಿಟ್ಟು ಓಡಿಬಂದು ತನ್ನ ಪ್ರಾಣ ರಕ್ಷಿಸಿಕೊಂಡಿದ್ದಾನೆ.
ಇದು ಸತ್ಯಮಂಗಲ ಹುಲಿ ರಕ್ಷಿತಾರಣ್ಯವೂ ಆಗಿರುವುದರಿಂದ ಸದ್ಯ ಇಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರವನ್ನು ನಿಷೇಸಲಾಗಿದೆ. ಅಲ್ಲಿ ಇದ್ದವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸಾಕಷ್ಟು ವೈರಲ್ ಆಗಿದೆ. ಈ ಹಿಂದೆ ಕೂಡ ಬಸ್ ಹಾಗೂ ಲಾರಿಗಳ ಮೇಲೆ ದಾಳಿ ಮಾಡಿದ್ದವು. ಇಂತಹ ಘಟನೆಗಳು ಮರುಕಳಿಸುತ್ತಿವೆ ಎನ್ನಲಾಗುತ್ತಿದೆ.