ನೂಪುರ್ ಶರ್ಮಾಗೆ ಕೊಲೆ ಬೆದರಿಕೆ : ಆರೋಪಿಗೆ ಉಪಾಯ ಹೇಳಿಕೊಟ್ಟ ರಾಜಸ್ತಾನ ಪೊಲೀಸರ ವಿಡಿಯೋ ವೈರಲ್ | JANATA NEWS
ಜೈಪುರ : ನೂಪುರ್ ಶರ್ಮಾ ಬೆದರಿಕೆ ಪ್ರಕರಣದಲ್ಲಿ ಸಲ್ಮಾನ್ ಚಿಸ್ತಿಗೆ ತಪ್ಪಿಸಿಕೊಳ್ಳಲು ಪೊಲೀಸರು ಸಲಹೆ ನೀಡುತ್ತಿರುವ ವೀಡಿಯೊದಲ್ಲಿ ರಾಜಸ್ತಾನದ ಕಾಂಗ್ರೆಸ್ ಸರ್ಕಾರ ಮತ್ತು ರಾಜ್ಯ ಪೊಲೀಸರ ಖ್ಯಾತಿ ಮತ್ತೊಮ್ಮೆ ಕಡಿಮೆಯಾಗಿದೆ.
ಅಜ್ಮೀರ್ ದರ್ಗಾದ ಸಲ್ಮಾನ್ ಚಿಶ್ತಿ ಎಂಬಾತ ನೂಪುರ್ ಶರ್ಮಾರಿಗೆ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ್ದು, ಅವರ ತಲೆದಂಡಕ್ಕೆ ಬಹುಮಾನ ಘೋಷಣೆ ಮಾಡಿದ್ದನು. ಈತನನ್ನು ಕರೆತರುವ ಸಂದರ್ಭದಲ್ಲಿ ಪೊಲೀಸರು ಈತನಿಗೆ ಪ್ರಕರಣದಿಂದ ಪಾರಾಗುವ ಉಪಾಯ ಹೇಳಿಕೊಟ್ಟಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಇತ್ತೀಚೆಗೆ ಸಲ್ಮಾನ್ ಚಿಶ್ತಿ ಬೆದರಿಕೆ ಹಾಕುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದನು. ಈ ವಿಡಿಯೋದಲ್ಲಿ ಈತ ನೂಪುರ್ ಶರ್ಮಾ ವಿರುದ್ಧ ಆಕ್ರೋಶಭರಿತ ಹೇಳಿಕೆ ನೀಡಿದ್ದು, ನೂಪುರ್ ಶರ್ಮಾ ಅವರ ರುಂಡವನ್ನು ಯಾರು ತಂದರೂ ಅವರಿಗೆ ನನ್ನ ಮನೆಯನ್ನು ಬಹುಮಾನವಾಗಿ ನೀಡುತ್ತೇನೆ, ಎಂದು ಹೇಳಿದ್ದ.
ಆದರೆ ಇದೀಗ ಪೊಲೀಸರ ಮತ್ತೊಂದು ವಿಡಿಯೋ ಹೊರಬಿದ್ದಿದ್ದು, ಇದರಲ್ಲಿ ಪೊಲೀಸರು ಸಲ್ಮಾನ್ ಚಿಸ್ತಿಯನ್ನು ರಕ್ಷಿಸಲು ಉಪಾಯ ಹೇಳಲು ಪ್ರಯತ್ನಿಸುತ್ತಿದ್ದಾರೆ. ಸಲ್ಮಾನ್ ಚಿಸ್ತಿಯ ತಾನು ನಶೆಯಲ್ಲಿ ಇರಲಿಲ್ಲ ಎಂದು ತಿಳಿಸಿದರೂ, ಪೊಲೀಸರು ಈತನಿಗೆ "ನೀನು ನಾಶೆಯಲ್ಲಿದ್ದೆ ಎಂದು ಹೇಳಿಬಿಡು, ಇದರಿಂದ ರಕ್ಷಿಸಬಹುದು" ಎಂದು ಹೇಳುವಾಗ ಕ್ಯಾಮೆರಾದಲ್ಲಿ ಸೆರೆಯಾಗಿದೆ.