ಸ್ಮಾರ್ಟ್ ಡಿವೈಸ್ ಬಳಸಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ | JANATA NEWS
ಬೆಂಗಳೂರು : ಸ್ಮಾರ್ಟ್ ಡಿವೈಸ್ ಬಳಸಿಕೊಂಡು ಕಾರುಗಳನ್ನ ಕದಿಯುತ್ತಿದ್ದ ಆರೋಪಿಯನ್ನು ಹೆಚ್ಎಸ್ಆರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಅರುಣ್ ಬಂಧಿತ, ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆದಿದ್ದ. ಸುಲಭವಾಗಿ ಹಣ ಸಂಪಾದನೆ ಮಾಡಿ ಮೋಜು ಮಸ್ತಿಗೆ ಕಳ್ಳತನದ ದಾರಿ ಹಿಡಿದಿದ್ದ.
ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಖದೀಮ ಅರುಣ್ ಗೆ ಸೆರೆಮನೆಯಲ್ಲಿ ಕೈದಿಯೊಬ್ಬನ ಪರಿಚಯವಾಗಿತ್ತು. ಆತನಿಂದ ತಂತ್ರಜ್ಞಾನ ಬಳಸಿ ಕಾರು ಹೇಗೆ ಕದಿಯುವುದು ಎಂಬುದನ್ನು ಕಲಿತು ಕೊಂಡಿದ್ದ. ಇದರಂತೆ ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ನೋಡಿ ನಂತರ ಅದೇ ರೀತಿಯ ಡಿವೈಸ್ ಒಂದನ್ನು ತೆಗೆದುಕೊಂಡು ಕಾರುಗಳನ್ನು ಕದಿಯುತ್ತಿದ್ದ.
ಕರ್ನಾಟಕದಲ್ಲಿ ಕದ್ದ ಕಾರುಗಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದನು. ಫೇಕ್ ನಂಬರ್ ಪ್ಲೇಟ್ ಹಾಕಿ ಮೊತ್ತೊಬ್ಬರಿಗೆ ಮಾರಾಟ ಮಾಡುತ್ತಿದ್ದನು. ಆರೋಪಿಯಿಂದ 70 ಲಕ್ಷ ಮೌಲ್ಯದ 10 ಕಾರು, 1 ಬೈಕ್ ವಶಪಡಿಸಿಕೊಳ್ಳಲಾಗಿದೆ.