ಜ್ಯೋತಿಷಿ ಜೊತೆಗಿದ್ದೇ ಸಂಚು ರೂಪಿಸಿದ್ದೆ ಆಪ್ತ ಸಹಾಯಕಿ ಮಹಿಳೆ! | JANATA NEWS
ಬೆಂಗಳೂರು : ಜ್ಯೋತಿಷಿ ಪ್ರಮೋದ್ ಎಂಬವರ ಕೈಕಾಲು ಕಟ್ಟಿ ದರೋಡೆ ಮಾಡಿದ ಪ್ರಕರಣ ಸಂಬಂಧ ಮಹಿಳೆ ಸೇರಿ ಆರು ಜನರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ಒಡಿಶಾ ಮೂಲದ ಪ್ರಮೋದ್ (45) ಎಂಬ ವ್ಯಕ್ತಿ ತನ್ನನ್ನು ಸ್ವಾಮೀಜಿಯಾಗಿ ಗುರುತಿಸಿಕೊಂಡಿದ್ದು, ಜ್ಯೋತಿಷ್ಯ ಹೇಳುತ್ತಿದ್ದರು. ಕೆಂಗೇರಿ ರೈಲ್ವೆ ನಿಲ್ದಾಣ ಸಮೀಪದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಅವರೊಂದಿಗೆ ಮಹಿಳಾ ಅನುಯಾಯಿಯೊಬ್ಬರು ನೆಲೆಸಿದ್ದರು.
ಮೇಘನಾ ಜ್ಯೋತಿಷಿ ಜೊತೆಯಲ್ಲಿರುವಾಗಲೇ ಆರೋಪಿಗಳು ಏಕಾಏಕಿ ನುಗ್ಗಿ ಮೇಘನಾಳ ಕೈಕಾಲು ಕಟ್ಟಿ ಜ್ಯೋತಿಷಿ ಪ್ರಮೋದ್ ಥಳಿಸಿದ್ದರು. ಹಲ್ಲೆ ಮಾಡಿ ಮನೆಯಲ್ಲಿದ್ದ 400 ಗ್ರಾಂ ಚಿನ್ನಾಭರಣ, 5 ಲಕ್ಷ ನಗದು ದೋಚಿದ್ದರು.
ಪ್ರಮೋದ್ ನೀಡಿರುವ ದೂರು ಆಧರಿಸಿ ತನಿಖೆ ನಡೆಸಿದ್ದು, ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದಾಗ ಆಕೆಯೇ ಈ ಕೃತ್ಯದ ಸೂತ್ರಧಾರಿ ಎಂದು ತಿಳಿದು ಬಂದಿದೆ.
ಜ್ಯೋತಿಷಿ ಸಹವರ್ತಿ ಮಹಿಳೆಯೇ ಕೃತ್ಯದ ಸೂತ್ರಧಾರಿ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಮೇಘನಾ ಸೇರಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಕೆಂಗೇರಿ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.