ಪ್ರೀತಿಸಿ ಮದ್ವೆಯಾಗಿದ್ದ ಜೋಡಿ, ವರದಕ್ಷಿಣೆ ಕಿರುಕುಳ ತಾಳದೇ ತಾಯಿ-ಮಗು ಆತ್ಮಹತ್ಯೆ, | JANATA NEWS
ಶಿವಮೊಗ್ಗ : ವರದಕ್ಷಿಣೆ ಕಿರುಕುಳ ತಾಳದೇ ಮಗನ ಜೊತೆ ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಪ್ಪಗಳಲೆ ಗ್ರಾಮದ ಶರತ್ ಎಂಬುವರ ಪತ್ನಿ ನಯನ(27) ಮತ್ತು ಮಗ ಗುರುರಾಜ(4) ಮೃತ ದುರ್ದೈವಿಗಳು.
5 ವರ್ಷದ ಹಿಂದೆ ಶರತ್ ಮತ್ತು ನಯನಾ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ವರದಕ್ಷಿಣೆ ವಿಚಾರಕ್ಕೆ ಪತ್ನಿ ಜತೆ ಪದೇಪದೆ ಜಗಳ ತೆಗೆಯುತ್ತಿದ್ದನಂತೆ. ಮನನೊಂದ ನಯನ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಅಮ್ಮ, ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಯನಾ ಪತಿ ಶರತ್ನನ್ನ ಪೊಲೀಸರು ಅರೆಸ್ಟ್ ಮಾಡಿದ್ದು, ಪತಿ ಶರತ್, ಅತ್ತೆ ಸೀತಮ್ಮ, ಮಾವ ಹಾಲೇಶ್ ವಿರುದ್ಧ ಸೊರಬ ಠಾಣೆಯಲ್ಲಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ.
English summary :A couple who were intoxicated in love, mother-child committed suicide due to dowry harassment.