ಆರತಕ್ಷತೆ ವೇಳೆಯೇ ಹೃದಯಾಘಾತ, ವರ ದುರ್ಮರಣ! | JANATA NEWS
ವಿಜಯನಗರ : ಮದುವೆ ಆರತಕ್ಷತೆ ವೇಳೆಯೇ ವರ ಹೃದಯಾಘಾತದಿಂದ ಮೃತಪಟ್ಟ ಘಟನೆ ಜಿಲ್ಲೆ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿಯಾಗಿದ್ದ ಹೊನ್ನೂರ ಸ್ವಾಮಿ (26) ಮೃತ ದುರ್ದೈವಿಯಾಗಿದ್ದಾರೆ.
ಪಾಪಿನಾಯಕನಹಳ್ಳಿ ಗ್ರಾಮದ ಹೊನ್ನೂರ ಸ್ವಾಮಿಗೆ ಗ್ರಾಮದಲ್ಲಿರೋ ಇರೋ ಸುಡುಗಾಡಪ್ಪನ ದೇವಸ್ಥಾನದಲ್ಲಿ ಮದುವೆಯಾಗಿತ್ತು. ಮದುವೆಯಾದ ಸಂತಸದಲ್ಲಿಯೇ ವರ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ. ಆತರಕ್ಷತೆಯಲ್ಲಿ ಹೊನ್ನೂರ ಸ್ವಾಮಿ ಎದೆ ನೋವಿನಿಂದ ಕುಸಿದು ಬಿದ್ದಿದ್ದಾನೆ. ಆಗ ಗಾಬರಿಯಾದ ಮನೆಯವರು, ಕುಟುಂಬಸ್ಥರೆಲ್ಲ ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಹೊನ್ನೂರ ಸ್ವಾಮಿಗೆ ಲೋ ಬಿಪಿಯಾಗಿದ್ದು, ಎಚ್ಚರ ತಪ್ಪಿದ್ದಾನೆ. ಪರೀಕ್ಷೆ ಮಾಡಿದ್ದ ವೈದ್ಯರು ಹೊಸಪೇಟೆಯಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ. ಆದ್ರೆ ಅಲ್ಲಿಗೆ ಹೋಗುವಷ್ಟರಲ್ಲಿ ಹೊನ್ನೂರಸ್ವಾಮಿ ಪ್ರಾಣಪಕ್ಷಿ ಹಾರಿಹೋಗಿದೆ. ಆಸ್ಪತ್ರೆಗೆ ಸಾಗಿಸೋ ದಾರಿ ಮಧ್ಯೆಯೇ ಆಂಬುಲೆನ್ಸ್ನಲ್ಲಿ ವರ ಹೊನ್ನೂರಸ್ವಾಮಿ ಮೃತಪಟ್ಟಿದ್ದಾರೆ.
ಮದುವೆಯಾಗಬೇಕಿದ್ದ ವರನ ನಿಧನದಿಂದ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.