ವಿಕ್ರಂತ್ ರೋಣ ಸಿನಿಮಾ ನೋಡುವಾಗ ಓರ್ವನಿಗೆ ಚಾಕು ಇರಿತ, ಮತ್ತೋರ್ವನ ಸ್ಥಿತಿ ಗಂಭೀರ | JANATA NEWS
ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಸಿನಿಮಾ ಪ್ರದರ್ಶನದ ವೇಳೆಯೆ ಮಾರಾಮಾರಿ ಆಗಿದೆ. ಎರಡು ಗುಂಪುಗಳು ಮಚ್ಚುಗಳಿಂದ ಹೊಡೆದಾಡಿಕೊಂಡಿವೆ.
ಚಿಕ್ಕಮಗಳೂರಿನ ಮಿಲನ್ ಚಿತ್ರ ಮಂದಿರದಲ್ಲಿ ವಿಕ್ರಂತ್ ರೋಣ ಸಿನಿಮಾ ವೀಕ್ಷಣೆ ವೇಳೆ, ಸಿನಿಮಾ ಸ್ಟೈಲ್ನಲ್ಲಿ ಇಳೆಹೊಳೆ ಗಣೇಶ ಹಾಗೂ ಗೂಳಿ ಅಳಿಯಾಸ್ ಭರತ್ ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಓರ್ವನಿಗೆ ಚಾಕು ಇರಿತ ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.
ಎರಡೂ ಗುಂಪಿನವರು ಸಿನಿಮಾ ಥಿಯೇಟರ್ನ ಆವರಣದಲ್ಲಿ ಮಚ್ಚು-ಲಾಂಗ್ನಿಂದ ಹೊಡೆದಾಡಿಕೊಂಡಿದ್ದಾರೆ. ಭರತ್ ಎಂಬುವವರಿಗೆ ಗಂಭೀರ ಗಾಯ ಆಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೆಲಕ್ಕೆ ಬಿದ್ದರೂ ಯುವಕರು ಭರತ್ ಮೇಲೆ ನಿರಂತರವಾಗಿ ಹಲ್ಲೆ ಮಾಡಿದ್ದಾರೆ.
RELATED TOPICS:
English summary :While watching the movie Vikrant Rona, one was stabbed, the condition of the other is critical