ಜಿಲ್ಲಾದ್ಯಂತ ಅಬಕಾರಿ ಇಲಾಖೆಯ ದಾಳಿ | Janata news
ಕಾರವಾರ : ಚುನಾವಣೆ ಬಿಸಿ ಏರುತ್ತಿದ್ದಂತೆ ಜಿಲ್ಲೆಯಲ್ಲಿ ಅಕ್ರಮ ಮದ್ಯಗಳ ಜಾಲ ಹೆಚ್ಚುತ್ತಿದ್ದು, ಅಬಕಾರಿ ಇಲಾಖೆಯು ದಾಳಿಮಾಡಿ ಜಿಲ್ಲಾದ್ಯಂತ ಭರ್ಜರಿ ಮೊತ್ತದ ಮದ್ಯ ವಶಕ್ಕೆ ತೆಗೆದುಕೊಂಡಿದೆ. ಒಂದು ದಿನದ ಒಳಗೆ ಜಿಲ್ಲೆಯಲ್ಲಿ ಸುಮಾರು ಆರು ಕಡೆ ದಾಳಿ ನಡೆದ ಬಗ್ಗೆ ತಿಳಿದುಬಂದಿದೆ.
1. ಅಬಕಾರಿ ನಿರೀಕ್ಷಕರು-1, ರಾಜ್ಯ ವಿಚಕ್ಷಣದಳ, ಬೆಂಗಳೂರು ಇವರು ಹೊನ್ನಾವರ ತಾಲೂಕಿನ ಹೊನ್ನಾವರ ಶಹರದ ಬಜಾರ ರೋಡ್ ಕಾಮತ ಹೊಟೇಲ್ ಎದುರುಗಡೆಯಲ್ಲಿ ಟಿ.ವಿ.ಎಸ್. ಅಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ 8.640 ಲೀಟರ್ ಭಾರತೀಯ ಮದ್ಯ ಮತ್ತು 7.920 ಲೀಟರ್ ಭಾರತೀಯ ಬೀರ್ನ್ನು ವಶಪಡಿಸಿಕೊಂಡು 01 ಘೋರ ಮೊಕದ್ದಮೆಯನ್ನು ದಾಖಲಿಸಿರುತ್ತಾರೆ. ವಾಹನ ಚಾಲಕನಾದ ಉದಯ ನಾರಾಯಣ ನಾಯ್ಕ, ಸಾ: ತೊಪ್ಪಲಕೇರಿ, ಕರ್ಕಿ, ಹೊನ್ನಾವರ ಇವರನ್ನು ಬಂದಿಸಿರುತ್ತಾರೆ. ಜಪ್ತಿಯಾದ ವಾಹನದ ಅಂದಾಜು ಮೌಲ್ಯರೂ. 2,00,000/- ಮತ್ತು ಮದ್ಯ ಮತ್ತು ಬೀರಿನ ಅಂದಾಜು ಮೌಲ್ಯರೂ. 4,906/- ಆಗಿರುತ್ತದೆ.
2. ಅಬಕಾರಿ ನಿರೀಕ್ಷಕರು, ಜಿಲ್ಲಾತಂಡ, ಕಾರವಾರಇವರು ಸಾಯಂಕಾಲ 5-00 ಗಂಟೆಗೆಕಾರವಾರ ಶಹರದ ಸುಭಾಶ ಸರ್ಕಲ್ ಹತ್ತಿರದ ಸೀಬರ್ಡ್ ಟ್ರಾವೆಲ್ಸ್ ಆಫೀಸ್ ಹತ್ತಿರದ ಮುಂಭಾಗದ ಪಾದಾಚಾರಿ ಮಾರ್ಗದಲ್ಲಿ ದಾಸ್ತಾನಿಟ್ಟಒಟ್ಟೂ 12.750 ಲೀಟರ್ ಗೋವಾ ಮದ್ಯ ಮತ್ತು 33.750 ಲೀಟರ್ ಫೆನ್ನಿಯನ್ನು ವಶಪಡಿಸಿಕೊಂಡು 01 ಘೋರ ಮೊಕದ್ದಮೆಯನ್ನು ದಾಖಲಿಸಿರುತ್ತಾರೆ. ಆರೋಪಿ ಯಾರೆಂದು ಪತ್ತೆಯಾಗಿರುವುದಿಲ್ಲ. ಜಪ್ತಿಯಾದ ಮದ್ಯದಅಂದಾಜು ಮೌಲ್ಯರೂ. 9,300/- ಆಗಿರುತ್ತದೆ.
3. ಅಬಕಾರಿ ಉಪ ನಿರೀಕ್ಷಕರು-1, ದಾಂಡೇಲಿ ವಲಯ, ದಾಂಡೇಲಿ ಇವರುರಾತ್ರಿ 8-15ಗಂಟೆಗೆ ಜೊಯಿಡಾ ತಾಲೂಕಿನ ರಾಮನಗರ ಗ್ರಾಮದ ಶಿವಾಜಿ ಸರ್ಕಲ್ ಬಳಿ ಇರುವ ಗೂಡಂಗಡಿಯ ಮೇಲೆ ಧಾಳಿ ನಡೆಸಿ, 0.030 ಲೀಟರ್ ಭಾರತೀಯ ಮದ್ಯವನ್ನು ವಶಪಡಿಸಿಕೊಂಡು, 01 15ಎ ಪ್ರಕರಣವನ್ನು ದಾಖಲಿಸಿರುತ್ತಾರೆ. (ಅಂದಾಜು ಮೌಲ್ಯರೂ. 30/-)
4. ಅಬಕಾರಿ ಉಪ ನಿರೀಕ್ಷಕರು-2, ಅನಮೋಡ ತನಿಖಾಠಾಣೆ ಇವರು ಸಾಯಂಕಾಲ 7-00 ಗಂಟೆಗೆ ರಹದಾರಿ ಪತ್ರ ಇಲ್ಲದೇ ಸಾಗಿಸುತ್ತಿದ್ದ 2.250 ಲೀಟರ್ ಭಾರತೀಯ ಮದ್ಯವನ್ನು ವಶಪಡಿಸಿಕೊಂಡು, 01 15ಎ ಪ್ರಕರಣವನ್ನು ದಾಖಲಿಸಿರುತ್ತಾರೆ. (ಅಂದಾಜು ಮೌಲ್ಯರೂ. 342/-)
5. ಅಬಕಾರಿ ನಿರೀಕ್ಷಕರು, ಹೊನ್ನಾವರ ವಲಯ ಇವರು ಹೊನ್ನಾವರ ತಾಲೂಕಿನ ಕಡತೋಕಾ ಗ್ರಾಮದಲ್ಲಿ ರಾತ್ರಿ 12-05 ಗಂಟೆಗೆ ಧಾಳಿ ನಡೆಸಿ, 1.260 ಲೀಟರ್ ಭಾರತೀಯ ಮದ್ಯವನ್ನು ವಶಪಡಿಸಿಕೊಂಡು, 01 15ಎ ಪ್ರಕರಣವನ್ನು ದಾಖಲಿಸಿರುತ್ತಾರೆ. (ಅಂದಾಜು ಮೌಲ್ಯರೂ. 392/-)
6. ಅಬಕಾರಿ ನಿರೀಕ್ಷಕರು, ಕುಮಟಾ ವಲಯ ಇವರು ಕುಮಟಾ ತಾಲೂಕಿನ ಸಾಂತಗಲ್ನ ದಿವಳ್ಳಿಯಲ್ಲಿ ಸಾಯಂಕಾಲ 7-00 ಗಂಟೆಗೆ ಧಾಳಿ ನಡೆಸಿ, 0.450 ಲೀಟರ್ ಭಾರತೀಯ ಮದ್ಯ ಮತ್ತು 1.950 ಭಾರತೀಯ ಬೀರ್ನ್ನು ವಶಪಡಿಸಿಕೊಂಡು, 01 15ಎ ಪ್ರಕರಣವನ್ನು ದಾಖಲಿಸಿರುತ್ತಾರೆ. (ಅಂದಾಜು ಮೌಲ್ಯರೂ. 480/-)