ವರದಕ್ಷಿಣೆ ಕಿರುಕುಳ ಆರೋಪ, ನಶೆ ಮತ್ತಲ್ಲಿ ಪತ್ನಿಯ ತಲೆಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ! | JANATA NEWS
ಬೆಂಗಳೂರು : ನಶೆ ಮತ್ತಲ್ಲಿ ಪತ್ನಿಯ ತಲೆಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೇರಿಯುತ್ತಿದ್ದ ಸಂಬಂಧ ಉದ್ಯಮಿ ಪುತ್ರಿ ಸಂದೀಪ್ ಎಂಬಾತನ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಂದೀಪ್ ಪ್ರತಿನಿತ್ಯ ಕುಡಿದು ಪತ್ನಿಗೆ ದೈಹಿಕ ಹಲ್ಲೆ ನಡೆಸಿರೋ ಆರೋಪಿ ಕೇಳಿ ಬಂದಿದೆ. ಈತ ಮನೆಯಲ್ಲಿ ಗೆಳೆಯರ ಜೊತೆ ಡ್ರಗ್ಸ್ ಪಾರ್ಟಿ ಮಾಡಿ ಪತ್ನಿಗೆ ಅಶ್ಲೀಲ ಬೈಗುಳ ಬೈಯುತ್ತಿದ್ದ, ಅಲ್ಲದೆ, ನಶೆ ಮತ್ತಲ್ಲಿ ಪತ್ನಿಯ ತಲೆಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೇರಿಯುತ್ತಿದ್ದ ಎಂದು ನೊಂದ ಯುವತಿಯಿಂದ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಸವನಗುಡಿ ನಿವಾಸಿ ಸಂದೀಪ್ ಎಂಬಾತ 2021ರ ಜನವರಿಯಲ್ಲಿ ಹೈದರಾಬಾದ್'ನ ಖ್ಯಾತ ಬಟ್ಟೆ ತಯಾರಿಕಾ ಕಂಪನಿ ಮಾಲೀಕನ ಮಗಳ ಮದುವೆಯಾಗಿದ್ದ. ಯುವತಿಯ ತಂದೆ ಹೈದರಾಬಾದ್ ನಲ್ಲಿ ಕಳೆದ 30 ವರ್ಷಗಳಿಂದ ಖ್ಯಾತ ಬ್ರಾಂಡ್ ನ ಬಟ್ಟೆ ತಯಾರಿಕಾ ಕಂಪನಿ ಹೊಂದಿದ್ದಾರೆ.
ಅಲ್ಲದೆ ಇವರು, ಹೈದರಾಬಾದ್ ಬೆಂಗಳೂರು ಸೇರಿ ಹಲವು ಮಹಾನಗರದಲ್ಲಿ ಇವರ ಮಾಲೀಕತ್ವದ ಬಟ್ಟೆ ಶೋ ರೂಂಗಳಿವೆ. ಹೀಗಾಗಿ ಮದುವೆಯ ನಂತರ ಅಳಿಯನಿಗೆ ಇಷ್ಟೆಲ್ಲ ವರದಕ್ಷಿಣೆ ಜೊತೆ ಎರಡು ಶೋ ರೂಂನ ಲಾಭಾಂಶವನ್ನು ಕೂಡ ಕೊಟ್ಟಿದ್ದರು.
2021ರ ಜನವರಿಯಲ್ಲಿ ರಾಮೋಜಿ ಫಿಲಂ ಸಿಟಿಯಲ್ಲಿ ಮಗಳನ್ನು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ. ಈ ವೇಳೆ 4 ಕೆಜಿ ಚಿನ್ನ, 200 ಕೆಜಿ ಬೆಳ್ಳಿ, 50 ಲಕ್ಷ ಹಣ, 55 ಲಕ್ಷದ ಮಿನಿಕೂಪರ್ ಕಾರು ವರದಕ್ಷಿಣೆ ನೀಡಿದ್ದರು. ಆದ್ರೆ, ಪದೇ ಪದೇ ವರದಕ್ಷಿಣೆ ತಗೊಂಡು ಬಾ ಎಂದು ಯುವತಿಗೆ ಪೀಡಿಸುತ್ತಿದ್ದರು ಎಂದು ನೊಂದ ಯುವತಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.