ಕೆಂಪು ಬಣ್ಣ ಈ ದೇಶದ ತ್ರಿವರ್ಣ ಧ್ವಜ ಎಂದು ಹೇಳುವ ವ್ಯಕ್ತಿಗಳಿಗೆ ನಾವು ಉತ್ತರ ಕೊಡಬೇಕಾ? | JANATA NEWS
ಶಿವಮೊಗ್ಗ : ಬಿಜೆಪಿ ಪಕ್ಷದ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಲಾಗುವುದಿಲ್ಲ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ, ಯಾವನೋ ಒಬ್ಬ ಹೇಳುತ್ತಾನೆ ಎಂದು ನಾವು ಯಾಕೆ ಕೇಳೋಣ? ಕೆಂಪು ಬಣ್ಣ ಈ ದೇಶದ ತ್ರಿವರ್ಣ ಧ್ವಜ ಎಂದು ಹೇಳುವ ವ್ಯಕ್ತಿಗಳಿಗೆ ನಾವು ಉತ್ತರ ಕೊಡಬೇಕಾ? ನಮಗೆ ರಾಷ್ಟ್ರಭಕ್ತಿ ಹೇಳಿಕೊಡುವ ಅವಶ್ಯಕತೆ ಕಾಂಗ್ರೆಸ್ ಗೆ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪಕ್ಷದವರಿಗೆ ತ್ರಿವರ್ಣ ಧ್ವಜದ ಬಗ್ಗೆ ಅಭ್ಯಾಸವರ್ಗ ಮಾಡಲಿ. ರಾಷ್ಟ್ರಧ್ವಜ ಮತ್ತು ಅದರ ಬಣ್ಣ, ಅದರ ಪಾವಿತ್ರ್ಯತೆ ಏನು, ಕೇಸರಿಗೂ ಕೆಂಪಿಗೂ ಇರುವ ವ್ಯತ್ಯಾಸ ಏನು ಎಂಬಿತ್ಯಾದಿ ಬಗ್ಗೆ ಕಾಂಗ್ರೆಸ್ನವರಿಗೆ ಅಭ್ಯಾಸವರ್ಗ ಆದರೆ ತ್ರಿವರ್ಣಧ್ವಜದ ಬಗ್ಗೆ ಗೌರವ ಬರುತ್ತದೆ ಎಂದರು.
ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗೆ ಧ್ವಜದ ಬಣ್ಣ ಗೊತ್ತಿಲ್ಲ. ಕೆಂಪು, ಬಿಳಿ, ಹಸಿರು ಎಂದು ಹೇಳುವ ಪರಿಸ್ಥಿತಿ ಅವರದ್ದಾಗಿದೆ. ಧ್ವಜದ ಬಣ್ಣದ ಕುರಿತು ನೀಡಿದ ಹೇಳಿಕೆಗೆ ಅವರು ಬಹಿರಂಗ ಕ್ಷಮೆಯಾಚಿಸಬೇಕು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ರಾಷ್ಟ್ರಧ್ವಜದ ಬಣ್ಣ ಕೇಸರಿ ಬದಲು ಕೆಂಪು, ಬಿಳಿ, ಹಸಿರು ಎಂದು ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗೆ ಧ್ವಜದ ಬಣ್ಣ ಗೊತ್ತಿಲ್ಲ. ಧ್ವಜದ ಬಣ್ಣದ ಕುರಿತು ನೀಡಿದ ಹೇಳಿಕೆಗೆ ಅವರು ಬಹಿರಂಗ ಕ್ಷಮೆಯಾಚಿಸಬೇಕು. ಕೆಂಪು, ಬಿಳಿ, ಹಸಿರು ಎಂದು ಹೇಳುವ ಪರಿಸ್ಥಿತಿ ಅವರದ್ದಾಗಿದೆ. ಆದರೆ ಇವತ್ತು ಸಾಮಾನ್ಯ ಜನರು ಜಾಗೃತಿರಾಗಿದ್ದು ಅರ್ಥ ಮಾಡಿಕೊಂಡಿದ್ದಾರೆ ಎಂದರು.
ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರು ಭಾರತ ದೇಶವನ್ನು ಎರಡು ಭಾಗ ಮಾಡಿದ್ದರು. ಹೀಗಾಗಿ ನೆಹರು ಸಂತತಿ ಅಂದರೆ ಅದು ಜಿನ್ನಾ ಸಂತತಿ ಇದ್ದಂತೆ. ಈಗ ಅದೇ ಸಂತತಿಗೆ ಸೇರಿದ ರಾಹುಲ್ ಗಾಂಧಿ ಅವರಿಂದ ದೇಶ ಜೋಡೋ ಪಾದಾಯಾತ್ರೆ ಮಾಡಲಾಗುತ್ತಿದೆ. ಇದು ದುಃಖದ ಸಂಗತಿಯಾಗಿದೆ.
ಭಾರತ ಜೋಡೋ ಶಬ್ದ ಬಳಕೆ ಮಾಡಲು ರಾಹುಲ್ ಗಾಂಧಿಗೆ ಯೋಗ್ಯತೆ ಇಲ್ಲ. ದೇಶ ತುಂಡು ಮಾಡಿದವರು ರಾಷ್ಟಭಕ್ತರೋ ಅಥವಾ ರಾಷ್ಟ್ರದ್ರೋಹಿಗಳೋ ಎಂದು ದೇಶದ ಜನ ತೀರ್ಮಾನ ಮಾಡಿದ್ದಾರೆ. ದೇಶದ ಜನರು ಮೂಲೆಗುಂಪು ಮಾಡಿರುವ ಸಂದರ್ಭದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.